Advertisement

ಇಂಗ್ಲೆಂಡ್ಗೆ ತೆರಳುವ ವಿದ್ಯಾರ್ಥಿನಿಗೆ ಸಮ್ಮಾನ 

12:29 PM Jun 29, 2018 | Team Udayavani |

ಬಂಟ್ವಾಳ: ಕಡೇಶಿವಾಲಯ ಶಾಲೆಯಲ್ಲಿ ಕಲಿಯುತ್ತಿರುವ ಯಶಸ್ವಿ ಕುಲಾಲ್‌ ಅವರು ಇಂಗ್ಲೆಂಡ್ ನ‌ಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚೆಸ್‌ ಸ್ಪರ್ಧೆಗೆ ಆಯ್ಕೆಯಾಗಿದ್ದು, ಅವರನ್ನು ಪಣೋಲಿಬೈಲ್‌ ಕುಲಾಲ-ಕುಂಬಾರರ ವೇದಿಕೆಯಿಂದ ಜೂ. 27ರಂದು ಸಮ್ಮಾನಿಸಲಾಯಿತು.

Advertisement

ವೇದಿಕೆಯ ಅಧ್ಯಕ್ಷ ಉಮೇಶ್‌ ಕುಲಾಲ್‌ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಚಂದಪ್ಪ ಬಂಗೇರ, ಪಣೋಲಿಬೈಲ್‌ ಕ್ಷೇತ್ರದ ಆನುವಂಶಿಕ ಪ್ರಧಾನ ಅರ್ಚಕ ವಾಸುದೇವ ಸಾಲ್ಯಾನ್‌, ಸಜೀಪಮೂಡ ಗ್ರಾ.ಪಂ. ಸದಸ್ಯ ರಮೇಶ್‌ ಎಂ., ವೇದಿಕೆ ಗೌರವಾಧ್ಯಕ್ಷ ರಮೇಶ್‌ ಕುಲಾಲ್‌, ಉಪಾಧ್ಯಕ್ಷ ಪದ್ಮನಾಭ ಕುಲಾಲ್‌, ಕಾರ್ಯದರ್ಶಿ ನವೀನ್‌ ಕುಮಾರ್‌, ರಾಮಣ್ಣ ಕೌಡಿಚ್ಚಾರ್‌, ಯಾದವ ಕುಲಾಲ್‌, ರವೀಂದ್ರ ಕುಲಾಲ್‌, ನಾಗೇಶ್‌ ಬಂಗೇರ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸುಂದರ ಮೂಲ್ಯ ಸ್ವಾಗತಿಸಿ, ಕೃಷ್ಣಪ್ಪ ಕುಲಾಲ್‌ ವಂದಿಸಿದರು. ಅಭಿಷೇಕ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next