Advertisement

ಶುಲ್ಕ ಕಡಿತ: ಸಿಎಂಗೆ ದೇಶಪಾಂಡೆ ಪತ್ರ

11:26 PM Apr 10, 2020 | Sriram |

ಬೆಂಗಳೂರು: ಲಾಕ್‌ಡೌನ್‌ನಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಕಷ್ಟದಲ್ಲಿದ್ದು, ತೆರಿಗೆ, ವಿದ್ಯುತ್‌ ಶುಲ್ಕ ಕಡಿತ ಮಾಡುವಂತೆ ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಅವರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

Advertisement

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಕೈಗಾರಿಕಾ ಘಟಕಗಳು, ವ್ಯಾಪಾರಿ ಸಂಸ್ಥೆಗಳು, ಮಾಲ್‌ಗ‌ಳ ಚಟುವಟಿಕೆ ಸ್ಥಗಿತಗೊಂಡಿದ್ದು, ಆರ್ಥಿಕ ಸಂಕಷ್ಟದಿಂದ ಬಳಲುತ್ತಿವೆ. ಈಗ ವಿದ್ಯುತ್‌ ಶುಲ್ಕ, ನೀರಿನ ಶುಲ್ಕ, ಆಸ್ತಿ ತೆರಿಗೆ ಹಾಗೂ ಇತರ ತೆರಿಗೆ ಪಾವತಿಸ ಸಮಯ ಸಮೀಪಿ ಸುತ್ತಿದೆ. ಈ ಉದ್ಯಮಗಳಿಗೆ ಅನು ಕೂಲವಾಗುವಂತೆ ಸ್ಥಳೀಯ ತೆರಿಗೆಗಳಲ್ಲಿ, ವಿದ್ಯುತ್‌ ಸಂಪರ್ಕಕ್ಕೆ ಸಂಬಂಧಿತ ತಿಂಗಳ ನಿಗದಿತ ಶುಲ್ಕದಲ್ಲಿ ರಿಯಾಯತಿ ನೀಡು ವುದು ಅತ್ಯಗತ್ಯ. ಆದ್ದರಿಂದ ಈ ವಿಷಯವನ್ನು ಆದ್ಯತೆ ಮೇರೆಗೆ ಪರಿಗಣಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next