Advertisement
ಸೆ. 23ರಂದು ಬಂಟ್ಸ್ ಹಾಸ್ಟೇಲ್ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ನೆರವು ವಿತರಣೆ ಮತ್ತು ಸಾಧಕರಿಗೆ ಸಮ್ಮಾನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಇಂದು ದಾನ, ಧರ್ಮ ಮರೆಯಾಗಿದ್ದು, ಭಯೋತ್ಪಾದನೆ, ಮೋಸ, ದರೋಡೆ ಸಕ್ರಿಯವಾಗಿವೆ. ಭಗವದ್ಗೀತೆಯಲ್ಲಿ ದಾನ, ಧರ್ಮದ ಮಹತ್ವದ ಬಗ್ಗೆ ಉಲ್ಲೇಖವಿದೆ. ಆದರೆ ಅದನ್ನು ಅನುಸರಿಸುವುದು ಕಡಿಮೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸಮಾಜದಿಂದ ಸಂಗ್ರಹಿಸಿ ಸಮಾಜಕ್ಕೆ ನೀಡುವುದು ದೊಡ್ಡ ದಾನ ಹಾಗೂ ಇದೊಂದು ಸಮಾಜ ಸೇವಾ ಕಾರ್ಯ. ಇಂತಹ ಕಾರ್ಯಗಳು ಒಕ್ಕೂಟದಿಂದ ನಿರಂತರ ನಡೆಯಲಿ ಎಂದು ಶುಭ ಹಾರೈಸಿದರು.
Related Articles
Advertisement
ಸಮಾರಂಭದಲ್ಲಿ ಪತ್ರಕರ್ತರಾದ ಮಾಲತಿ ಶೆಟ್ಟಿ ಮಾಣೂರು ಮತ್ತು ನಿಶಾಂತ್ ಶೆಟ್ಟಿ ಕಿಲೆಂಜೂರು ಅವರನ್ನು ಸಮ್ಮಾನಿಸಲಾಯಿತು. ಎಸ್. ವಿ. ರಾಜೇಂದ್ರ ಸಿಂಗ್ ಬಾಬು, ವಿಜಯ ಕುಮಾರ್ ಕೊಡಿಯಾಲ್ಬೈಲ್, ರತ್ನಾಕರ ಶೆಟ್ಟಿ ಮುಂಡ್ಕೂರು, ಲ| ವಸಂತ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವಿಸಿ ದರು. ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್ ಫಲಾನುಭವಿಗಳ ಹೆಸರು ವಾಚಿಸಿದರು. ಕೊಲ್ಲಾಡಿ ಬಾಲಕೃಷ್ಣ ರೈ, ಸಾಯಿನಾಥ್ ಶೆಟ್ಟಿ ಮುಂಡ್ಕೂರು ಸಮ್ಮಾನಪತ್ರ ವಾಚಿಸಿ ದರು. ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್ದಾಸ್ ಶೆಟ್ಟಿ ವಂದಿಸಿದರು. ಸಿಂಧ್ಯಾ ಶೆಟ್ಟಿ ಪ್ರಾರ್ಥನೆಗೈದರು. ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರ್ವಹಿಸಿದರು.
12 ಲಕ್ಷ ರೂ. ವಿತರಣೆಸಮಾರಂಭದಲ್ಲಿ ವೈದ್ಯಕೀಯ ನೆರವಿಗಾಗಿ ಬಂದ ಅರ್ಜಿಗಳಲ್ಲಿ 10 ಮಂದಿ ಫಲಾನುಭವಿಗಳಿಗೆ, ಶಿಕ್ಷಣಕ್ಕೆ ಸಹಾಯದಲ್ಲಿ 6 ಮಂದಿ ಫಲಾನುಭವಿಗಳಿಗೆ, ಮದುವೆ ಸಹಾಯಾರ್ಥವಾಗಿ ಮೂರು ಮಂದಿ ಫಲಾನುಭವಿಗಳಿಗೆ ಮತ್ತು ಮನೆ ನಿರ್ಮಾಣ ಹಾಗೂ ಮನೆ ರಿಪೇರಿಗೆ 18 ಮಂದಿ ಫಲಾನುಭವಿಗಳಿಗೆ ಸುಮಾರು 12 ಲಕ್ಷ ರೂ. ಗಳನ್ನು ವಿತರಿಸಲಾಯಿತು. ಸೇವಾ ಕಾರ್ಯ ನಿರಂತರ
ಉಳ್ಳವರಿಗೆ ಎಲ್ಲರೂ ಇದ್ದಾರೆ. ಆದರೆ ಏನೂ ಆಸರೆಯಿಲ್ಲದವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದೆ. ಲಾಕ್ಡೌನ್ ಸಂದರ್ಭದಲ್ಲೂ ಸಹಾಯ ಕೇಳಿ ಅರ್ಜಿ ಹಾಕಿದವರನ್ನು ಹಿಂದೆ ಕಳುಹಿಸಲಿಲ್ಲ. ಒಕ್ಕೂಟದ ಸೇವಾ ಕಾರ್ಯ ನಿರಂತರ ನಡೆಯಲಿದೆ. ಮದುವೆ, ಶಿಕ್ಷಣ, ಆರೋಗ್ಯ ಹೀಗೆ ಬೇರೆ ಬೇರೆ ಸಮಸ್ಯೆಗಳಿಗೆ ಸಂಬಂಧಿಸಿ ಒಕ್ಕೂಟಕ್ಕೆ ಬಂದ ಅರ್ಜಿಗಳೆಲ್ಲವನ್ನೂ ಪರಿಶೀಲಿಸಿ ಪ್ರಸಾದ ರೂಪದಲ್ಲಿ ಸಹಾಯ ಮಾಡಿದ್ದೇವೆ. ಇಂತಹ ಕಾರ್ಯಕ್ಕೆ ಸಮಾಜದಲ್ಲಿರುವ ದಾನಿಗಳು, ಉದ್ಯಮಿಗಳು ಕೈ ಜೋಡಿಸಿದರೆ ಕೆಳಸ್ತರದಲ್ಲಿರುವ ಸಮಾಜದವರಿಗೆ ಸಹಾಯ ಮಾಡಲು ಅನುಕೂಲವಾಗುತ್ತದೆ.
-ಐಕಳ ಹರೀಶ್ ಶೆಟ್ಟಿ , ಅಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ