Advertisement

ನೋಟಿಸ್‌ಗೆ ಹೆದರಿ ರೈತ ನೇಣಿಗೆ ಶರಣು

07:26 AM Jun 08, 2019 | Team Udayavani |

ಜಮಖಂಡಿ: ರೈತರ ಸಾಲಮನ್ನಾಕ್ಕೆ ಬದ್ಧ ಎಂದು ಸರ್ಕಾರ ಹೇಳುತ್ತಿರುವಾಗಲೇ ಬರ ಮತ್ತು ಬೆಳೆ ಹಾನಿಯಿಂದ ನೊಂದಿದ್ದ ರೈತ ಸಾಲ ವಸೂಲಿಗಾಗಿ ಜಮಖಂಡಿಯ ಅರ್ಬನ್‌ ಬ್ಯಾಂಕ್‌ ನೀಡಿದ ನೋಟಿಸ್‌ಗೆ ಹೆದರಿ ಗುರುವಾರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಟ್ಟಣದ ನಿವಾಸಿ ಧರೆಪ್ಪ ಹಣಮಂತಪ್ಪ ಬೆನಕನ್ನವರ (60) ಆತ್ಮಹತ್ಯೆ ಮಾಡಿಕೊಂಡವರು.

Advertisement

20 ಗುಂಟೆ ಜಮೀನು ಹೊಂದಿದ್ದು, ಜಮಖಂಡಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 35 ಸಾವಿರ ರೂ. ಮತ್ತು ಜಮಖಂಡಿಯ ಅರ್ಬನ್‌ ಬ್ಯಾಂಕ್‌ನಲ್ಲಿ 6 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ. ಆದರೆ, ಬ್ಯಾಂಕ್‌ ನೋಟಿಸ್‌ ನೀಡಿದ್ದರಿಂದ ಗಾಬರಿಗೊಂಡ ಧರೆಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅವರ ಪುತ್ರ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next