Advertisement

ಗುಳೆ ಹೋದವರನ್ನು ಕಂಡರೆ ಭಯ

06:04 PM Mar 31, 2020 | Suhan S |

ಕಾರಟಗಿ: ಕೋವಿಡ್ 19 ವೈರಸ್‌ ಹಾವಳಿ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆಂತಕ ಮೂಡಿಸಿದೆ. ದೂರದ ಊರುಗಳಿಂದ ಬರುವವರ ಮೇಲೆ ಸಂಶಯ ಪಡುವವರು ಹೆಚ್ಚಾಗಿದ್ದರಿಂದ ವಾಹನಗಳಲ್ಲಿ ಬಂದ ಜನರನ್ನು ಕಂಡ ಕೂಡಲೇ ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.

Advertisement

ಈಗಾಗಲೇ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ವಾಹನಗಳ ತಪಾಸಣೆ ಕೂಡ ನಡೆದಿದ್ದು, ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಓಡಾಟ ಹೆಚ್ಚುತ್ತಿದೆ. ದೂರದ ಬೆಂಗಳೂರು ಮತ್ತು ಇತರೆ ಜಿಲ್ಲೆಗಳಿಗೆ ಗುಳೆ ಹೋದವರು ಖಾಸಗಿ ವಾಹನಗಳಲ್ಲಿ ತಮ್ಮ ಊರುಗಳಿಗೆ ಆಗಮಿಸುತ್ತಿದ್ದು, ಗ್ರಾಮಗಳ ಜನತೆ ಗುಳೆಯಿಂದ ಬಂದವರನ್ನು ಆಸ್ಪತ್ರೆಗೆ ಕಳಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರು ಊರಿಗೆ ಬಂದ ವ್ಯಕ್ತಿಗಳ ಪೂರ್ವಾಪರ ವಿಚಾರಣೆ ನಡೆಸಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡುತ್ತಿದ್ದು, ಇದರಿಂದ ಆತಂಕಗೊಂಡ ಜನರು ಆಸ್ಪತ್ರೆಗೆ ಆಗಮಿಸಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next