Advertisement

Onion: ಈರುಳ್ಳಿ ಬೆಲೆ ಏರಿಕೆಯ ಆತಂಕ

11:22 PM Sep 20, 2023 | Team Udayavani |

ಮುಂಬಯಿ: ಇತ್ತೀಚೆಗೆ ದೇಶಾದ್ಯಂತ ಟೊಮಾಟೊ ದರ ಏರಿಕೆಯಾಗಿ ಜನರಿಗೆ ಆತಂಕ ಉಂಟಾಗಿತ್ತು. ಅದೇ ಸ್ಥಿತಿ ಈರುಳ್ಳಿಗೂ ಉಂಟಾಗುವ ಆತಂಕ ಉಂಟಾಗುವ ಸಾಧ್ಯತೆಗಳು ಇವೆ. ಮಹಾರಾಷ್ಟ್ರದ ನಾಸಿಕ್‌ನ ಈರುಳ್ಳಿ ಮಾರುಕಟ್ಟೆಯಲ್ಲಿ ವರ್ತರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ.

Advertisement

ಕೇಂದ್ರ ಸರಕಾರ ಈರುಳ್ಳಿ ರಫ್ತು ಮೇಲೆ ವಿಧಿಸಲಾಗಿರುವ ಶೇ.40 ತೆರಿಗೆ ಖಂಡಿಸಿ ಪ್ರತಿಭಟನೆಗಳು ನಡೆಸಲಾಗುತ್ತಿದೆ. ಡಿಸೆಂಬರ್‌ವರೆಗೆ ಈರುಳ್ಳಿ ರಫ್ತಿನ ಮೇಲೆ ಶೇ.40ರ ಸುಂಕ ವಿಧಿಸುವ ಸರ್ಕಾರದ ನಿರ್ಣಯವನ್ನು ಖಂಡಿಸಿ ನಾವು ಹರಾಜು ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲು ನಿಶ್ಚಯಿಸಿದ್ದೇವೆ ಎಂದು ಈರುಳ್ಳಿ ವರ್ತಕರ ಸಂಘ ತಿಳಿಸಿದೆ. ಹೀಗಾಗಿ, ದಸರೆ, ದೀಪಾವಳಿ ವೇಳೆ ಈರುಳ್ಳಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next