Advertisement

ಸರಕಾರಕ್ಕೆ ರಾಜಸ್ವ ಕೊರತೆ ಭೀತಿ- ತೆರಿಗೆ ಸಂಗ್ರಹಕ್ಕೆ ಕಠಿನ ಪ್ರಯತ್ನ- ಸಿಎಂ ಸ್ಪಷ್ಟ ಸೂಚನೆ

12:45 AM Dec 02, 2023 | Team Udayavani |

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಮಧ್ಯೆ ಸರಕಾರಕ್ಕೆ ರಾಜಸ್ವ ಸಂಗ್ರಹ ಕೊರತೆಯ ಭೀತಿ ಸೃಷ್ಟಿಯಾಗಿದ್ದು, ತೆರಿಗೆ ಸಂಗ್ರಹಕ್ಕಾಗಿ ಕಠಿನ ಪ್ರಯತ್ನ ನಡೆಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

Advertisement

ಶುಕ್ರವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಅವರಿಗೆ ರಾಜಸ್ವ ಕೊರತೆಯ ಸವಾಲು ಸ್ಪಷ್ಟವಾಗಿದೆ. ಸವಾಲುಗಳ ಮಧ್ಯೆ ಮೋಟಾರು ವಾಹನ ತೆರಿಗೆ ಸಂಗ್ರಹದಲ್ಲಿ ಮಾತ್ರ ಲಕ್ಷ್ಯ ತಲುಪುವುದಕ್ಕೆ ಸಾಧ್ಯ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮುಂಬರುವ ದಿನಗಳು ಸರಕಾರಕ್ಕೆ ಹಗ್ಗದ ಮೇಲಿನ ನಡಿಗೆಯಾಗುವ ಸಾಧ್ಯತೆ ಇದೆ.

ಹೆಚ್ಚುವರಿ ಬೇಡಿಕೆ ಮುಂದಿಟ್ಟ ಇಲಾಖೆ
ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಗಳಿಗಾಗಿ 7,500 ಕೋಟಿ ರೂ. ಹೆಚ್ಚುವರಿ ಬೇಡಿಕೆಯನ್ನು ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿಟ್ಟಿ ರುವುದು ಮತ್ತೂಂದು ಆತಂಕಕ್ಕೆ ಕಾರಣವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿತರಕ್ಷಣೆ ಸರಕಾರದ ಆದ್ಯತೆ. ನಿಮ್ಮ ಬೇಡಿಕೆಗೆ ಬೆಂಬಲವಿದೆ. ಪೂರಕ ಬಜೆಟ್‌ ಮಂಡನೆ ವೇಳೆ ಈ ಬಗ್ಗೆ ಯೋಚಿಸೋಣ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next