Advertisement

ಲಂಚ ಪಡೆಯುವಾಗ ಎಫ್‌ಡಿಎ ಎಸಿಬಿ ಬಲೆಗ

02:05 PM Jun 03, 2018 | Team Udayavani |

ಸೇಡಂ: ಕಚೇರಿ ಬಿಲ್‌ ಪಾವತಿಸಲು ಲಂಚ ಪಡೆಯುವ ವೇಳೆ ಇಲ್ಲಿನ ಪತ್ರಾಂಕಿತ ಉಪ ಖಜಾನೆ ಪ್ರಥಮ ದರ್ಜೆ ಗುಮಾಸ್ತ ಲಾಲಪ್ಪ ಪೂಜಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

Advertisement

ಶನಿವಾರ ಮಧ್ಯಾಹ್ನ ಮುಧೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ದ್ವಿತೀಯ ದರ್ಜೆ ಗುಮಾಸ್ತ ವಿನಯಕುಮಾರ ಸಿಂಪಿ ಎನ್ನುವರ ಬಳಿ 11 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಡಿವೈಎಸ್ಪಿ ಜೇಮ್ಸ್‌ ಮಿನೆಜಸ್‌ ನೇತೃತ್ವದಲ್ಲಿ ದಾಳಿ ನಡೆದಿದೆ.

ಪತ್ರಾಂಕಿತ ಉಪ ಖಜಾನೆ ಎಫ್‌ಡಿಎ ಲಾಲಪ್ಪ ಪೂಜಾರಿ, ಮುಧೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ಬಿಲ್‌ ಪಾವತಿ ಮಾಡಲು 40 ಸಾವಿರ ರೂ. ಬೇಡಿಕೆ ಇಟ್ಟಿದ್ದ. ಮೊದಲು 29 ಸಾವಿರ ರೂ. ಪಡೆದಿದ್ದ ಲಾಲಪ್ಪ ಉಳಿದ 11 ಸಾವಿರ ರೂ. ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ. 

ದಾಳಿಯಲ್ಲಿ ಎಸಿಬಿ ಡಿವೈಎಸ್ಪಿ ಜೇಮ್ಸ್‌ ಮಿನೇಜಸ್‌, ಅಧಿಕಾರಿ ಕಪಿಲದೇವ, ಸಿಬ್ಬಂದಿ ಮರೆಪ್ಪ, ಅರ್ಜುನಸಿಂಗ್‌, ಶರಣಬಸಪ್ಪ, ಶ್ರೀಮಂತ, ಪ್ರಕಾಶ, ಬಸಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next