Advertisement

ಕಳ್ಳನಿಂದ ಮಹಿಳೆಗೆ ಮಚ್ಚಿನೇಟು

11:27 AM Jan 28, 2017 | Team Udayavani |

ಬೆಂಗಳೂರು: ಕಳ್ಳತನಕ್ಕೆ ಬಂದಿದ್ದ ಯುವಕನೊಬ್ಬ ಮಹಿಳೆಯೊಬ್ಬರ ಕಾಲಿಗೆ ಮಚ್ಚಿನಿಂದ ಹೊಡೆದು ಪರಾರಿಯಾಗಿರುವ ಘಟನೆ ಮನೋರಾಯನಪಾಳ್ಯ ಸಮೀಪದ ಸೀತಪ್ಪ ಲೇ ಔಟ್‌ನಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ.

Advertisement

ಹಲ್ಲೆಯಿಂದ ಗಿರಿಜಾ (36) ಎಂಬುವರ ಕಾಲಿಗೆ ಗಂಭೀರ ಸ್ವರೂಪ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಆರೋಗ್ಯ ಸುಧಾರಿಸಿದ ಬಳಿಕ ಹೇಳಿಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಗಿರಿಜಾ ಅವರ ಮನೆಗೆ ಕಳ್ಳತನಕ್ಕೆ ಬಂದಿದ್ದ ಆರೋಪಿ ಶೌಚಾಲಯದಲ್ಲಿ ಅಡಗಿ ಕುಳಿತಿದ್ದ, ಈ ವೇಳೆ ಅಲ್ಲಿಗೆ ಬಂದ ಗಿರಿಜಾ ಅವರ ಮೇಲೆ ಹಲ್ಲೆ ನಡೆಸಿದ.

ಗಾಯಾಳು ಗಿರಿಜಾ ಅವರು ಪತಿ ಮತ್ತು ಮಕ್ಕಳೊಂದಿಗೆ ಮನೋರಾಯನಪಾಳ್ಯ ಸಮೀಪದ ಸೀತಪ್ಪ ಲೇಔಟ್‌ನಲ್ಲಿ ನೆಲೆಸಿದ್ದಾರೆ. ತಾವು ನೆಲೆಸಿರುವ ಮನೆಗೆ ಸಮೀಪವೇ ಗಿರಿಜಾ ಪತಿ ಜತೆ ತಳ್ಳುಗಾಡಿಯಲ್ಲಿ ಸಣ್ಣ ಹೋಟೆಲ್‌ ನಡೆಸುತ್ತಾರೆ. ತಾವು ವಾಸಿಸುವ ಮನೆಯ ನೆಲ ಮಹಡಿಯಲ್ಲಿ ಗಿರಿಜಾ ಅವರು ಶುಕ್ರವಾರ 4 ಗಂಟೆಯಲ್ಲಿ ನಾದಿನಿ ಸುಂದರಮ್ಮ ಜತೆ ಅಡುಗೆ ಮಾಡುತ್ತಿದ್ದರು. ತಿಂಡಿ ತಯಾರು ಮಾಡಿದ ಬಳಿಕ ತಿಂಡಿಯನ್ನು ತಳ್ಳುಗಾಡಿಯಲ್ಲಿಟ್ಟು ಕೈ ತೊಳೆದುಕೊಳ್ಳಲು ಶೌಚಾಲಯಕ್ಕೆ ತೆರಳಿದ್ದರು.

ಈ ವೇಳೆ ಶೌಚಾಲಯದಲ್ಲಿ ಅಡಗಿ ಕುಳತಿದ್ದ ದುಷ್ಕರ್ಮಿಯೊಬ್ಬನನ್ನು ನೋಡಿ ಗಿರಿಜಾ ಅವರು ಜೋರಾಗಿ ಚೀರಿಕೊಂಡಿದ್ದಾನೆ. ಗಿರಿಜಾ ಚೀರಿಕೊಳ್ಳುತ್ತಿದ್ದಂತೆಯೇ ಮಚ್ಚಿನಿಂದ ಮಹಿಳೆ ಕಾಲಿಗೆ ದುಷ್ಕರ್ಮಿ ಹೊಡೆದು ಪರಾರಿಯಾದ. ಆರೋಪಿ ಪತ್ತೆಗೆ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next