Advertisement

Father, son ನಿಗೂಢ ಸಾವು; ಕ್ರಿಯಾ ಸಮಿತಿ ಪದಾಧಿಕಾರಿಗಳಿಂದ ಹೇಳಿಕೆ ದಾಖಲಿಸಿದ ಪೊಲೀಸ್‌

10:07 PM Aug 19, 2023 | Team Udayavani |

ಕುಂಬಳೆ: ಯುವಮೋರ್ಚಾ ನೇತಾರ ಹಾಗು ತಂದೆಯ ನಿಗೂಢ ಸಾವಿಗೆ ಸಂಬಂಧಿಸಿ ಲಭಿಸಿದ ದೂರಿನ ಮೇರೆಗೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದರಂಗವಾಗಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಚೆಯರ್‌ವೆುàನ್‌ ಪ್ರದೀಪ್‌ ಆರಿಕ್ಕಾಡಿ, ಸಂಚಾಲಕ ಮೋಹನ್‌ ಬಂಬ್ರಾಣ ಅವರಿಂದ ಕುಂಬಳೆ ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ.

Advertisement

ಬಂಬ್ರಾಣದ ಕಲ್ಕುಳದ ಮೂಸ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಯುವಮೋರ್ಚಾ ಕುಂಬಳೆ ಮಂಡಲ ಸಮಿತಿ ಉಪಾಧ್ಯಕ್ಷರಾಗಿದ್ದ ರಾಜೇಶ್‌(30) ಕಳೆದ ತಿಂಗಳ 10 ರಂದು ನಾಪತ್ತೆಯಾಗಿ ಬಳಿಕ ಉಳ್ಳಾಲ ಬಂಗರ ಸಮುದ್ರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರ ಸಾವಿನಲ್ಲಿ ನಿಗೂಢತೆಗಳಿವೆಯೆಂದೂ, ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಬೇಕೆಂದು ಪೊಲೀಸರಲ್ಲಿ ಆಗ್ರಹಿಸಿದ್ದರು. ರಾಜೇಶ್‌ ಸಾವಿನಲ್ಲಿ ನಿಗೂಢತೆಗಳಿವೆಯೆಂದೂ ಈ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದ ರಾಜೇಶ್‌ ಅವರ ತಂದೆ ಲೋಕನಾಥ್‌ ಅವರ ಸಾವಿನಲ್ಲೂ ನಿಗೂಢತೆಗಳಿವೆಯೆಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದೇ ವೇಳೆ ಆರೋಪಕ್ಕೆಡೆಯಾದ ಇಬ್ಬರು ತಲೆಮರೆಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next