Advertisement

ಸಿಂಧನೂರು: ಅತ್ಯಾಚಾರ ಸಂತ್ರಸ್ತೆಯ ತಂದೆ ಆತ್ಮಹತ್ಯೆಗೆ ಶರಣು

10:02 AM Feb 04, 2020 | sudhir |

ಸಿಂಧನೂರು: ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಮಗಳನ್ನು ಕರೆದುಕೊಂಡು ಹೋಗುವಾಗ ಅಪರಿಚಿತ ಬೈಕ್‌ ಸವಾರ ಮಗಳ ಮೇಲೆ ಅತ್ಯಾಚಾರ ನಡೆಸಿದ ಘಟನೆಯಿಂದ ನೊಂದ ತಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 13 ದಿನಗಳ ಹಿಂದೆ ಮಗಳನ್ನು ರಾತ್ರಿ ತನ್ನೊಂದಿಗೆ ಸಿದ್ರಾಂಪುರಕ್ಕೆ ಕರೆದುಕೊಂಡು ಹೋಗುವಾಗ ಬಾಳೆಗಿಡ ಕ್ಯಾಂಪ್‌ ಬಳಿ ಅಪರಿಚಿತ ಬೈಕ್‌ ಸವಾರ ಡ್ರಾಪ್‌ ಕೊಡುವುದಾಗಿ ಹೇಳಿ ತಂದೆಗೆ ಮದ್ಯ ಕುಡಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಘಟನೆಯಿಂದ ಮನನೊಂದ ತಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next