Advertisement
18 ವರ್ಷಗಳಿಂದ ಸೈನಿಕನಾಗಿ ಸೇವೆ ಸಲ್ಲಿಸಿ, ನಿವೃತ್ತಿ ಬಳಿಕ ಶಿವಾಜಿ ಲಕ್ಷ್ಮಣ ಗೌಂಡನಕರ (40) ಜೊಯಿಡಾ ತಾಲೂಕಿನ ಬಿರಿಯಂಪಾಲಿ ಗ್ರಾಮದ ಅಕ್ವೋಡಾ ಮಜರೆಯಲ್ಲಿ ಜಾಗ ಖರೀದಿಸಿ ಕೃಷಿ ಕೆಲಸ ಮಾಡುತ್ತಿದ್ದರು. ಇಲ್ಲಿ ರಸ್ತೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಹಳ ದಿನಗಳಿಂದ ಸ್ಥಳೀಯರು ಹಾಗೂ ಇವರ ನಡುವೆ ಮನಸ್ತಾಪ ಉಂಟಾಗಿತ್ತು. ಇದನ್ನು ತಹಶೀಲ್ದಾರ್ಇತ್ಯರ್ಥ ಪಡಿಸಿದ್ದರು. ಆದರೆ ಮಂಗಳವಾರ ಸಂಜೆ ಶಿವಾಜಿ ಲಕ್ಷ್ಮಣ ಗೌಂಡನಕರ ಕೂಲಿಗಳೊಂದಿಗೆ ಕೆಲಸ ಮಾಡುತ್ತಿದ್ದಾಗ
ಸ್ಥಳೀಯರಾದ ಪದ್ದು ಪಾವಣೆ, ಠಕ್ಕು ಪಾವಣೆ, ಭಾಗ್ಯಾ ಪಾವಣೆ, ಜ್ಯೋತಿಯಾ ಪಾವಣೆ, ಚೀಮಣಿ ಪಾವಣೆ, ಗಂಗಿ ಪಾವಣೆ, ನಾಗಿ ಪಾವಣೆ, ಜೆನ್ನಿ ಪಾವಣೆ, ಸಾಕರಿ ಪಾವಣೆ, ಸುನೀತಾ ಪಾವಣೆ, ಭಾಗೀರಥಿ ಪಾವಣೆ, ಸೋನಿ ಪಾವಣೆ, ವೀರು ಪಾವಣೆ, ಪುರುಷೋತ್ತಮ ಮಿರಾಶಿ, ಮಹೇಶ ಮಿರಾಶಿ, ಜೋಸೆಫ್ ಬಾಬು ಇವರೆಲ್ಲ ಸೇರಿ ಬಡಿಗೆಗಳಿಂದ ಹಲ್ಲೆ ಮಾಡಲು ಆರಂಭಿಸಿದರು.
ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Related Articles
Advertisement
ಶಿವಾಜಿ ಲಕ್ಷ್ಮಣ ಗೌಂಡನಕರಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್ಡಿಎಂ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದಂತೆ ಅಶ್ವತ್ಥ ಸತ್ಯಪ್ಪ ನಾಯ್ಕ, ಚಂದ್ರಕಾಂತ ಮಾರುತಿ ನಾಯ್ಕ, ಪರಶುರಾಮ ರಾಣಬಾ ನಾಯ್ಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಈ ಕುರಿತಂತೆ ಚಂದ್ರಕಾಂತ ನಾಯ್ಕ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಿಎಸೈ ಹನುಮಂತ ಬಿರದಾರ ತನಿಖೆ ಕೈಗೊಂಡಿದ್ದಾರೆ