Advertisement

ಫಾಸ್ಟ್ಯಾಗ್‌: ಸ್ಥಳೀಯರಿಗೆ ಸಮಸ್ಯೆ ಮಾಡದಂತೆ ಮನವಿ

12:06 AM Nov 24, 2019 | Team Udayavani |

ಕೋಟ: ದೇಶಾದ್ಯಂತ ಎಲ್ಲ ಟೋಲ್‌ಗ‌ಳಲ್ಲಿ ಡಿ.1ರಿಂದ ಫಾಸ್ಟ್ಯಾಗ್‌ ಕಡ್ಡಾಯಗೊಳಿಸಲಾಗಿದ್ದು, ಇದರಿಂದ ಸ್ಥಳೀಯ ವಾಹನಗಳಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರು ಶುಕ್ರವಾರ ಸಾಸ್ತಾನ ಟೋಲ್‌ನಲ್ಲಿ ಮನವಿ ಸಲ್ಲಿಸಿದರು.

Advertisement

ಫಾಸ್ಟ್ಯಾಗ್‌ ಆರಂಭವಾಗುತ್ತಿದ್ದಂತೆ ಸ್ಥಳೀಯರಿಗೆ ಇದುವರೆಗೆ ನೀಡುತ್ತಿದ್ದ ಉಚಿತ ಪ್ರವೇಶ ರದ್ದುಪಡಿಸುವ ಹುನ್ನಾರ ನಡೆಯುತ್ತಿದೆ ಮತ್ತು ಸ್ಥಳೀಯರು ಹಾಗೂ ಫಾಸ್ಟ್ಯಾಗ್‌ ಇಲ್ಲದ ವಾಹನಗಳನ್ನು ಒಂದೇ ಗೇಟ್‌ನಲ್ಲಿ ಬಿಡಲಾಗುತ್ತದೆ. ಇದರಿಂದ ವಾಹನದಟ್ಟನೆ ಹೆಚ್ಚಿ ತಾಸು ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಲಿದೆ. ಆದ್ದರಿಂದ ಸ್ಥಳೀಯ ಗೆ ಪ್ರತ್ಯೇಕ ಗೇಟ್‌ ವ್ಯವಸ್ಥೆ ಮಾಡಬೇಕು ಎಂದು ಜಾಗೃತಿ ಸಮಿತಿ ಅಧ್ಯಕ್ಷ ಪ್ರತಾಪ್‌ ಶೆಟ್ಟಿ ತಿಳಿಸಿದರು.

ಹೋರಾಟದ ಎಚ್ಚರಿಕೆ
ಸ್ಥಳೀಯರಿಗೆ ನೀಡಲಾದ ಉಚಿತ ಪ್ರವೇಶ ರದ್ದುಪಡಿಸಿದರೆ ಮತ್ತು ಎಲ್ಲ ವಾಹನಗಳಿಗೆ ಒಂದೇ ಗೇಟ್‌ನಲ್ಲಿ ಪ್ರವೇಶಕ್ಕೆ ಅವಕಾಶ ನೀಡಿ ಟ್ರಾಫಿಕ್‌ ಜಾಮ್‌ ಉಂಟಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಯಿತು.

ರಾ.ಹೆ. ಪ್ರಾಧಿಕಾರದ ಗಮನಕ್ಕೆ
ಫಾಸ್ಟ್ಯಾಗ್‌ಗೆ ಸಂಬಂಧಿಸಿ ಎಲ್ಲ ನಿರ್ಧಾರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಕೈಗೊಳ್ಳುವುದರಿಂದ ಸಮಸ್ಯೆಯನ್ನು ಇಲಾಖೆಯ ಗಮನಕ್ಕೆ ತರಲಾಗುವುದು ಮತ್ತು ಅಲ್ಲಿನ ಆದೇಶದಂತೆ ಮುಂದುವರಿಯಲಾಗುವುದು ಎಂದು ಟೋಲ್‌ನ ನಿರ್ವಾಹಕ ಕೇಶಮೂರ್ತಿ ತಿಳಿಸಿದರು.

ಜಾಗೃತಿ ಸಮಿತಿ ಕಾರ್ಯದರ್ಶಿ ವಿಟ್ಟಲ ಪೂಜಾರಿ, ಪ್ರಮುಖರಾದ ಶ್ಯಾಮ್‌ ಸುಂದರ ನಾೖರಿ, ರಾಜೇಶ್‌ ಕಾವೇರಿ, ನಾಗರಾಜ್‌ ಗಾಣಿಗ ಸಾಲಿಗ್ರಾಮ, ಪಾಂಡೇಶ್ವರ ಗ್ರಾ.ಪಂ. ಅಧ್ಯಕ್ಷ ಗೋವಿಂದ ಪೂಜಾರಿ, ಅಲ್ವಿನ್‌ ಅಂದ್ರಾಡೆ, ಸಂದೀಪ್‌ ಕೋಡಿ, ಸುರೇಶ್‌ ಗಿಳಿಯಾರು ಮತ್ತು ಟೋಲ್‌ ಪಿಆರ್‌ಒ ಯೋಗೀಶ್‌ ಉಪಸ್ಥಿತರಿದ್ದರು.

Advertisement

ಟೋಲ್‌ ನಿರ್ವಾಹಕರಿಗೆ ಮನವಿ ಮಾಡುತ್ತಿರುವ ಜಾಗೃತಿ ಸಮಿತಿಯ ಸದಸ್ಯರು.

Advertisement

Udayavani is now on Telegram. Click here to join our channel and stay updated with the latest news.

Next