Advertisement
ರಾಯಚೂರು: ಆಸೆ ಕೆಟ್ಟದ್ದು. ಆಸೆಯೇ ದುಖಕ್ಕೆ ಮೂಲ ಎಂದಿದ್ದಾರೆ ದಾರ್ಶನಿಕರು. ಇಂಥ ಆಸೆಯ ಬೆನ್ನತ್ತಿದ ಎಷ್ಟೋ ಜನ ಕೈಯಲ್ಲಿದ್ದ ಹಣಕಳೆದುಕೊಂಡು ಪೇಚಾಡುತ್ತಿದ್ದು,ಅದಕ್ಕೆ ಮುಖ್ಯ ಕಾರಣ ಆನ್ ಲೈನ್ ಮೋಸ ಜಾಲ ಎಂಬುದು ಗಮನಾರ್ಹ.
Related Articles
Advertisement
ಹನಿಟ್ರ್ಯಾಪ್ನಿಂದ ವಂಚನೆ :
ಅಷ್ಟೇ ಅಲ್ಲ ಹನಿಟ್ರ್ಯಾಪ್ನಿಂದಲೂ ಹಣ ವಂಚಿಸಲಾಗುತ್ತಿದೆ. ಸುಂದರ ಹುಡುಗ, ಹುಡುಗಿಯ ಫೋಟೋ ಹಾಕಿ ಚಾಟಿಂಗ್ ಮಾಡಿ ಮೋಸದ ಬಲೆಗೆ ಬೀಳಿಸಲಾಗುತ್ತಿದೆ. ಅವರಿಂದ ಹಂತ ಹಂತವಾಗಿ ಹಣ ಪಡೆದು ವಂಚಿಸಲಾಗುತ್ತಿದೆ. ಇಂಥದ್ದೇ ಪ್ರಕರಣದಲ್ಲಿ ಜಿಲ್ಲೆಯ ಯುವತಿಯೊಬ್ಬರು 38 ಸಾವಿರ ರೂ. ಕಳೆದುಕೊಂಡಿದ್ದಾರೆ. ನಾನು ವಿದೇಶದಲ್ಲಿದ್ದು ನಿನಗಾಗಿ ದುಬಾರಿ ಮೌಲ್ಯದ ಉಡುಗೊರೆ ಕಳುಹಿಸಿದ್ದೇನೆ ಎಂದು ಯುವಕ ತಿಳಿಸಿದ್ದಾನೆ. ಒಂದೆರಡು ದಿನಗಳ ಬಳಿಕ ಬೇರೆ ಸಂಖ್ಯೆಯಿಂದ ಕರೆ ಬಂದಿದ್ದು, ನಾವು ದೆಹಲಿಯ ಕೋರಿಯರ್ ಸಂಸ್ಥೆಯಿಂದ ಕರೆ ಮಾಡುತ್ತಿದ್ದು, ನಿಮ್ಮ ಹೆಸರಿಗೆ ಉಡುಗೊರೆ ಬಂದಿದ್ದು, 38 ಸಾವಿರ ರೂ. ಪಾವತಿಸಿದರೆ ಕಳುಹಿಸಲಾಗುವುದು ಎಂದು ತಿಳಿಸಲಾಗಿದೆ. ಇದನ್ನು ನಂಬಿದ ಯುವತಿ ಖಾತೆಗೆ ಹಣ ಪಾವತಿಸಿದ್ದಾರೆ. ಮರುಕ್ಷಣವೇ ಎರಡು ಮೊಬೈಲ್ ಸಂಖ್ಯೆ ನಾಟ್ ರೀಚೆಬಲ್ ಆಗಿದೆ.
ಚೈನ್ ಬಿಸಿನೆಸ್ ಕೂಡ: ಗುಜರಾತ್ ಮೂಲದ ಅವೆಂಟೆಜ್ ಕ್ರೌಡ್ ಫಂಡಿಂಗ್ ಎನ್ನುವ ಸಂಸ್ಥೆಯ ಚೈನ್ ಬಿಸಿನೆಸ್ ನಂಬಿ ಸಾವಿರಾರು ಜನ ಕೋಟ್ಯಂತರ ಹಣ ಕಳೆದುಕೊಂಡಿದ್ದಾರೆ. ಜಿಲ್ಲೆಯ ಆರ್ಎಂಪಿ ವೈದ್ಯರೊಬ್ಬರು 2625 ರೂ.ಪಾವತಿಸಿ ಸದಸ್ಯರಾಗಿದ್ದು, ಇತರರನ್ನು ಸದಸ್ಯರನ್ನಾಗಿ ಮಾಡಿದ್ದಾರೆ. ಕಮಿಷನ್ ಆಸೆಗೆ ಬಲಿಯಾಗಿ 5374 ಜನ ಹಣ ಹೂಡಿದ್ದಾರೆ. ಆರಂಭದಲ್ಲಿ ಪ್ರಚಾರಕ್ಕಾಗಿ ಒಂದಷ್ಟು ಜನರಿಗೆ ಕಮಿಷನ್ ಹಣ ನೀಡಲಾಗಿದೆ. ದೊಡ್ಡ ಮೊತ್ತ ಕ್ರೋಡೀಕರಣವಾಗುತ್ತಿದ್ದಂತೆ ಕಂಪನಿ ನಾಪತ್ತೆಯಾಗಿದೆ. ಕಂಪನಿಯ ವೆಬ್ಸೈಟ್ ಕೂಡ ಡಿಲಿಟ್ ಮಾಡಲಾಗಿದೆ. ಆದರೆ, ಇಷ್ಟೆಲ್ಲ ವ್ಯವಹಾರ ನಡೆಸಿದರೂ ಕಂಪನಿಯ ಯಾವೊಂದು ದಾಖಲೆಗಳು ಸರಿಯಾಗಿಲ್ಲ. ಈಗ ಅಸ್ತಿತ್ವದಲ್ಲೇ ಇಲ್ಲದ ಕಂಪನಿ ನಂಬಿದ ಜನ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ.
ಸೈನಿಕರ ಹೆಸರಲ್ಲೂ ವಂಚನೆ! : ಬರೀ ಯಾವುದೋ ಕಂಪನಿಗಳ ಹೆಸರಲ್ಲಿ ಮಾತ್ರವಲ್ಲ ಸೈನಿಕರ ಹೆಸರಿನಲ್ಲೂ ಆನ್ಲೈನ್ನಲ್ಲಿ ವಂಚನೆಮಾಡಲಾಗುತ್ತಿದೆ. ಫೇಸ್ಬುಕ್, ಇನ್ಸ್ಟಾಗ್ರಾಮ್ನಂತಸಾಮಾಜಿಕ ಜಾಲತಾಣದಲ್ಲಿ ವಂಚಿಸಲಾಗುತ್ತಿದೆ. ನಾನೊಬ್ಬ ಸೈನಿಕ. ತುರ್ತಾಗಿ ಸೇನೆಗೆ ಮರಳಬೇಕಿದ್ದು, ನನ್ನ ವಾಹನ ಮಾರಾಟಕ್ಕಿದೆ. ಕಡಿಮೆ ದರದಲ್ಲಿ ನೀಡುತ್ತಿದ್ದು, ಆಸಕ್ತರುಸಂಪರ್ಕಿಸುವಂತೆ ಪೋಸ್ಟ್ಗಳನ್ನು ಹಾಕಲಾಗುತ್ತದೆ. ಇಂಥ ಖಾತೆಗಳನ್ನು ಪರಿಶೀಲಿಸಿದಾಗ ಆ ಹೆಸರಿನ ಸೈನಿಕರೇ ಇರುವುದಿಲ.
21 ಲಕ್ಷ ಕಳೆದುಕೊಂಡ ಯುವತಿ : ಜಿಲ್ಲೆಯ ಸುಶಿಕ್ಷಿತ ಯುವತಿಯೊಬ್ಬರು ಇಂಥ ಮೋಸದ ಜಾಲಕ್ಕೆ ಸಿಲುಕಿ ಬರೋಬ್ಬರಿಗೆ 21 ಲಕ್ಷ ರೂ. ಕಳೆದುಕೊಂಡ ವಿಚಿತ್ರ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಆನ್ಲೈನ್ನಲ್ಲಿ ಪರಿಚಯವಾದ ವ್ಯಕ್ತಿಗೆ ಹಂತ-ಹಂತವಾಗಿ ಹಣ ಪಾವತಿಸುತ್ತಾ ಬಂದಿದ್ದಾರೆ. ಈ ರೀತಿ ಲಕ್ಷಾಂತರ ರೂ. ಪಾವತಿಸಲಾಗಿದೆ. ಕೊನೆಗೆ ಸತ್ಯ ಅರಿವಾಗಿದ್ದು, ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಬೆನ್ನತ್ತಿದಾಗ ಅದು ಉತ್ತರ ಭಾರತದ ರಾಜ್ಯದ ಖಾತೆ ಎಂಬುದು ತಿಳಿದು ಬಂದಿದ್ದು, ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಈವರೆಗೂ ವಂಚಕರ ಸುಳಿವು ಸಿಕ್ಕಿಲ್ಲ.
ಮಹಿಳೆಯರೇ ಟಾರ್ಗೆಟ್ : ಆನ್ಲೈನ್ ವಂಚಕರಿಗೆ ಮಹಿಳೆಯರೇ ಟಾರ್ಗೆಟ್ ಎನ್ನುವುದು ಗಮನಾರ್ಹ. ಜಿಲ್ಲೆಯಲ್ಲಿ ನಡೆದ ಸಾಕಷ್ಟು ಪ್ರಕರಣಗಳಲ್ಲಿ ಮಹಿಳೆಯರೂ ಹಣಕಳೆದುಕೊಂಡಿದ್ದಾರೆ. ಮಹಿಳೆಯರಿಗೆ ಕರೆ ಮಾಡಿ ಇನ್ನಿಲ್ಲದ ಆಮಿಷವೊಡ್ಡಿ ವಂಚಿಸಲಾಗುತ್ತಿದೆ. ಆದರೆ, ಅತಿಯಾಸೆಗೆ ಬಿದ್ದ ಮಹಿಳೆಯರು ಹಿಂದೆ ಮುಂದೆ ನೋಡದೆ ಇಂಥ ಜಾಲಕ್ಕೆ ಸಿಲುಕಿ ಕೊನೆಗೆ ಪೆಚ್ಚು ಮೋರೆ ಹಾಕಿಕೊಳ್ಳುವಂತಾಗಿದೆ.
ಉತ್ತರ ಭಾರತ ಪೊಲೀಸರ ಅಸಹಕಾರ : ಇಂಥ ಮೋಸ ಜಾಲ ಇರುವುದೇ ಉತ್ತರ ಭಾರತದ ರಾಜ್ಯಗಳಲ್ಲಿ. ಪ್ರಕರಣದ ಬೆನ್ನತ್ತಿ ಅಲ್ಲಿಗೆ ಹೋಗಲು ಮುಂದಾದ ಪೊಲೀಸರಿಗೆ ಆ ರಾಜ್ಯದ ಪೊಲೀಸರು ಸರಿಯಾಗಿ ಸಹಕಾರ ನೀಡುವುದಿಲ್ಲ ಎಂಬ ಆರೋಪಗಳಿವೆ. ಅಲ್ಲೆಲ್ಲ ಅಂಧಾ ಕಾನೂನು ಜಾರಿಯಲ್ಲಿದ್ದು, ಪೊಲೀಸರೇ ಒಂಟಿಯಾಗಿ ಓಡಾಡುವುದಿಲ್ಲ. ಅಂಥದ್ದರಲ್ಲಿ ನಾವು ಹೋಗಿ ನಮ್ಮೊಟ್ಟಿಗೆ ಬನ್ನಿ ಎಂದು ಕೇಳಿದರೆ ಅಲ್ಲಿನ ಪೊಲೀಸರು ಸರಿಯಾಗಿ ಸ್ಪಂದಿಸುವುದಿಲ್ಲ. ಹೇಗೋ ಪ್ರಯಾಸದಿಂದ ಹೋದರೂ ಆ ವಿಳಾಸದಲ್ಲಿ ವಂಚಕ ಇರುವುದೇ ಇಲ್ಲ. ಅಲ್ಲಿಯೂ ಅಮಾಯಕರನ್ನು ಬಲಿ ಮಾಡಲಾಗಿರುತ್ತದೆ ಎನ್ನುವುದು ಪೊಲೀಸರ ವಿವರಣೆ.
ನುರಿತ ಸಿಬ್ಬಂದಿ ಇಲ್ಲ : ಆನ್ಲೈನ್ನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ವಂಚಕರು ತುಂಬಾ ತೀಕ್ಷ್ಣಮತಿಗಳಾಗಿರುತ್ತಾರೆ. ಅವರನ್ನು ಬೆನ್ನತ್ತಬೇಕಾದರೆ ವಿಶೇಷ ನುರಿತ ತಾಂತ್ರಿಕ ಸಿಬ್ಬಂದಿ ಇರಬೇಕು. ತಂತ್ರಜ್ಞಾನ ಬಳಸಿ ಅಪರಾಧಿ ಗಳಿಗಂತ ವೇಗದಲ್ಲಿ ಪ್ರಕರಣ ಬೇಧಿಸುವ ಸಿಬ್ಬಂದಿಯ ಅಗತ್ಯವಿದೆ. ಈಗಿರುವ ಸಿಬ್ಬಂದಿಗೆ ತರಬೇತಿ ನೀಡಿ ಆ ನಿಟ್ಟಿನಲ್ಲಿ ತಯಾರಿಸಬೇಕಿದೆ. ಇಲ್ಲವಾದರೆ ಇಂಥ ಪ್ರಕರಣ ಬೇಧಿ ಸುವುದು ಕಷ್ಟ ಎನ್ನುವುದು ಅಧಿಕಾರಿಗಳ ವಿಶ್ಲೇಷಣೆ.
–ಸಿದ್ಧಯ್ಯಸ್ವಾಮಿ ಕುಕುನೂರು