Advertisement

ಬೆಳೆಹಾನಿಯಿಂದ ಕಂಗೆಟ್ಟ ರೈತರು

12:19 PM Dec 15, 2018 | |

ಕಾಳಗಿ: ಪಟ್ಟಣದಲ್ಲಿ ರಾತ್ರಿಯಿಡಿ ಸುರಿದ ಭಾರಿ ಮಳೆಗೆ ಅಲ್ಪಸ್ವಲ್ಪ ಬೆಳೆದು ನಿಂತ ಜೋಳದ ಬೆಳೆ ನೆಲಚ್ಚಿದ್ದು, ಕಟಾವು ಮಾಡಿ ರಾಶಿ ಮಾಡಲು ಒಂದೆಡೆ ಶೇಖರಿಸಿಟ್ಟಿದ್ದ ತೊಗರಿ ಬೆಳೆ ಹಾಳಾಗಿ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಬಿತ್ತನೆಗಾಗಿ ಸಾಲ ಮಾಡಿರುವ ರೈತರು ಭೀಕರ ಬರಗಾಲದಿಂದ ಕಂಗೆಟ್ಟಿದ್ದಾರೆ.

Advertisement

ಕಳೆದ ಮೂರು ತಿಂಗಳಿಂದ ಬಾರದೆ ಇರುವ ಮಳೆ ಅಲ್ಪ ಸ್ವಲ್ಪ ಬೆಳೆದ ತೊಗರಿ ಬೆಳೆಯನ್ನು ರಾಶಿ ಮಾಡುವಾಗ ಬಂದಿದ್ದರಿಂದ ಅದು ರೈತರ ಕೈಗೆ ಸೇರದಂತಾಗಿದೆ. ತಾಲೂಕಿನಾದ್ಯಂತ ರಾತ್ರಿಯಿಡಿ ಸುರಿದ ಭಾರಿ ಮಳೆಯಿಂದ
ಜೋಳದ ಬೆಳೆ ನೆಲ ಕಚ್ಚಿದೆ. 

ತೊಗರಿ ಬೆಳೆ ನಷ್ಟವಾಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ಎಂದು ರೈತ ವಿಜಯಕುಮಾರ ಸುಂಠಾಣ ಸಂಕಷ್ಟ ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next