Advertisement

ಕೈಯಲ್ಲಿ ವಿಷದ ಬಾಟಲಿ, ಕೊರಳಲ್ಲಿ ನೇಣಿನ ಹಗ್ಗ ಹಾಕಿಕೊಂಡು ರೈತರ ಪ್ರತಿಭಟನೆ

02:39 PM Feb 10, 2021 | Team Udayavani |

ಬೆಳಗಾವಿ: ಹಲಗಾ-ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ಕೈಯಲ್ಲಿ ವಿಷದ ಬಾಟಲಿ ಹಾಗೂ ಕೊರಳಲ್ಲಿ ನೇಣಿನ ಹಗ್ಗ ಹಾಕಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.

Advertisement

ಹಲಗಾ-ಮಚ್ಛೆ ಬೈಪಾಸ್ ರಸ್ತೆಯನ್ನು ಯಾವುದೇ ಕಾರಣಕ್ಕೂ ಆರಂಭಿಸಬಾರದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲ್ಲಿ ಕೆಲಸ ನಡೆಸಲು ಬರಬಾರದು. ತಕ್ಷಣವೇ ಈ ಕಾಮಗಾರಿಯನ್ನು ನಿಲ್ಲಿಸಬೇಕು. ಇಲ್ಲದೇ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:  ಮ್ಯಾಗ್ನೆಟ್ ಮ್ಯಾನ್ ಆಗಲು ಹುಚ್ಚು ಸಾಹಸ : ಈತನ ಹೊಟ್ಟೆಯಲ್ಲಿ ಸಿಕ್ಕಿದ್ದು ಏನು ಗೊತ್ತಾ ?

ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೈಯಲ್ಲಿ ವಿಷದ ಬಾಟಲಿ, ಕೊರಳಲ್ಲಿ ಹಗ್ಗ ಹಾಕಿಕೊಂಡು ಆತ್ಮಹತ್ಯೆಯ ಬೆದರಿಕೆ ಹಾಕಿದರು.‌

ನಿನ್ನೆ ಕೆಲಸ ಆರಂಭಿಸಲು ಬಂದಾಗ ರೈತರು ಜೆಸಿಬಿ ಮುಂದೆ ಮಲಗಿ ಪ್ರತಿಭಟನೆ ನಡೆಸಿ ಪ್ರಾಧಿಕಾರದವರನ್ನು ವಾಪಸ್ ಕಳುಹಿಸಿದ್ದರು.  ಈಗ ಮತ್ತೆ ವಿಷದ ಬಾಟಲಿ ಹಿಡಿದು ಕುಳಿತಿದ್ದಾರೆ.‌

Advertisement

ಇದನ್ನೂ ಓದಿ: ರಾಮನ ಪೋಷಾಕು, ಸೀತೆ ಜತೆ ವನವಾಸ….ರಾಮಾಯಣಕ್ಕೆ ಟಾಲಿವುಡ್ ಪ್ರಿನ್ಸ್ ಗೆ ಬಿಗ್ ಆಫರ್  

 

Advertisement

Udayavani is now on Telegram. Click here to join our channel and stay updated with the latest news.

Next