Advertisement

ವ್ಯಾಪಾರಸ್ಥರಿಂದ ರೈತರಿಗೆ ಅನ್ಯಾಯ :ದಾಸನಕೊಪ್ಪದಲ್ಲಿ ಬಾಳೆ ಬೆಳೆಗಾರರಿಂದ ದಿಢೀರ್ ಪ್ರತಿಭಟನೆ

10:11 AM Aug 14, 2022 | Team Udayavani |

ಶಿರಸಿ : ತಾಲೂಕಿನ ದಾದನಕೊಪ್ಪದಲ್ಲಿ ಭಾನುವಾರ ಬಾಳೆ ಬೆಳೆಗಾರರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ರವಿವಾರ ನಡೆಯಿತು.

Advertisement

ತಾಲೂಕು ದಾಸನಕೊಪ್ಪದಲ್ಲಿ ರವಿವಾರ ನಡೆದ ಸಂತೆ ಮಾರುಕಟ್ಟೆಯಲ್ಲಿ ಬಾಳೆಕಾಯಿ ವ್ಯಾಪಾರಸ್ಥರು ರೈತರಿಗೆ ಮೋಸ ಮಾಡುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಪ್ರಸ್ತುತ ಬಾಳೆಕಾಯಿ ದರ 50 ರಿಂದ 60 ರೂಪಾಯಿ ಇದೆ. ಆದರೆ, ವ್ಯಾಪಾರಸ್ಥರು ಎಲ್ಲರೂ ಸೇರಿ 20 ರೂ ಕಿಲೋ ಗೆ ಕೊಟ್ಟು ಖರೀದಿ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ನೂರಾರು ರೈತರು ಪ್ರತಿಭಟನೆ ನಡೆಸಿದರು. ಐನೂರು ಕ್ವಿಂಟಾಲ್ ಗೂ ಅಧಿಕ ಬಾಳೆಗೊನೆ ಬಂದಿದ್ದವು.

ರೈತರೆಲ್ಲರು ಸೇರಿ ಪ್ರತಿಭಟನೆ ಮಾಡುತ್ತಿದ್ದ ವೇಳೆ ಎಪಿಎಂಸಿ ಅಧ್ಯಕ್ಷ ‌ಪ್ರಶಾಂತ ಗೌಡ ಆಗಮಿಸಿ ಪ್ರತಿಭಟನೆಯನ್ನು ಶಾಂತಗೊಳಿಸಿ ಬಾಳೆಗೆ 25ರಿಂದ 40 ರೂ. ತನಕ ಗುಣಮಟ್ಟದ‌ ಮೇಲೆ ಕಿಲೊಗೆ ನೀಡಲು ವರ್ತಕರನ್ನು ಒಪ್ಪಿಸುವ ಮೂಲಕ ವಾತಾವರಣ ತಿಳಿಗೊಳಿಸಿದರು.

ಇದನ್ನೂ ಓದಿ : ಬೈಂದೂರು : ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದ ಬೈಕ್ : ಸವಾರನಿಗೆ ಗಂಭೀರ ಗಾಯ

 

Advertisement
Advertisement

Udayavani is now on Telegram. Click here to join our channel and stay updated with the latest news.

Next