Advertisement

ನೀರುಗಳ್ಳರ ವಿರುದ್ಧ ಕ್ರಮಕ್ಕೆ ರೈತ ಸಂಘ ಆಗ್ರಹ

02:44 PM Jul 29, 2020 | Suhan S |

ರಾಯಚೂರು: ತುಂಗಭದ್ರಾ ಎಡದಂಡೆಯ 55ನೇ ಕಾಲುವೆ ವ್ಯಾಪ್ತಿಯಲ್ಲಿ ಅಕ್ರಮ ನೀರಾವರಿ ಹೆಚ್ಚಾಗಿದ್ದು, ನೀರುಗಳ್ಳರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ರೈತ ಸಂಘದ ಮಸ್ಕಿ ತಾಲೂಕು ಘಟಕದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಮಸ್ಕಿ ನೀರಾವರಿ ವ್ಯಾಪ್ತಿಗೆ ಒಳಪಡುವ ಈ ಕಾಲುವೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನೀರಾವರಿ ಮಾಡಲಾಗಿದೆ. ಸುಮಾರು 50ಕ್ಕೂ ಹೆಚ್ಚು ಪಂಪ್‌ಸೆಟ್‌ ಅಳವಡಿಕೆ ಮಾಡಲಾಗಿದೆ. ಅಕ್ರಮ ಪೈಪ್‌ ಗಳ ತೂಬುಗಳನ್ನು ಕೂಡಲೇ ಬಂದ್‌ ಮಾಡಿಸಬೇಕು. 55ನೇ ಕಾಲುವೆ 0ದಿಂದ 16 ಕಿಮೀವರೆಗೆ ಎಡಭಾಗದವರೆಗೆ ಮಾತ್ರ ನೀರಾವರಿ ಅಚ್ಚುಕಟ್ಟು ಪ್ರದೇಶವಾಗಿದೆ. ಆದರೆ, ಬಲಭಾಗದಲ್ಲೂ ನೀರಾವರಿಗೆ ನೀರು ಬಳಸಿಕೊಳ್ಳಲಾಗುತ್ತಿದೆ. ಸಿಂಧನೂರು ನೀರಾವರಿ ಇಲಾಖೆ ಇಇ ಹಾಗೂ ಮಸ್ಕಿಯ ಎಇಇ ಕೂಡಲೇ ಅಕ್ರಮ ಪಂಪ್‌ ಸೆಟ್‌ ಹಾಗೂ ಪೈಪ್‌ಗ್ಳ ತೆರವಿಗೆ ಮುಂದಾಗಬೇಕು. ಟಿಎಲ್‌ಬಿಸಿ ವ್ಯಾಪ್ತಿಯ ಅಕ್ರಮ ನೀರುಗಳ್ಳರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕೆಳಭಾಗದವರಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಕಾಲುವೆಗೆ ನೀರು ಹರಿಸಿದ ತಕ್ ಕ್ಷಣ ವಾರ ಬಂದಿ ಪ್ರಕಾರ ಮೇಲ್ಭಾಗದಲ್ಲಿ 16ನೇ ಕಿಮೀವರೆಗೂ ಗೇಜ್‌ ನಿರ್ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್‌ ಪಾಷಾ ದಿದ್ದಗಿ, ಆರ್‌ವೈಎಫ್‌ಐ ಸಂಘಟನೆ ರಾಜ್ಯಾಧ್ಯಕ್ಷ ಎಂ.ಗಂಗಾಧರ, ರೈತ ಮುಖಂಡರಾದ ಭೀಮಯ್ಯ ಜಾಲವಾಡ್ಗಿ, ಚೆನ್ನಾರೆಡ್ಡಿ ಸಾಗರ ಕ್ಯಾಂಪ್‌, ನಿಂಗಪ್ಪ, ನಾಗನಗೌಡ ಬಾವಿ ದಿದ್ದಗಿ, ಸಿದ್ಧನಗೌಡ ನಾಗಡಗೌಡ, ರಾಜರೆಡ್ಡಿ ಸಾಗರ ಕ್ಯಾಂಪ್‌ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next