Advertisement

ಸಾಲ ಬಾಧೆ: ಹೊಲದಲ್ಲಿ ನೇಣಿಗೆ ಶರಣಾದ ರೈತ

08:41 AM Jul 24, 2022 | Team Udayavani |

ಕೊಪ್ಪಳ: ತಾಲೂಕಿನ ಚಿಕ್ಕ ಸಿಂದೋಗಿ ಗ್ರಾಮದಲ್ಲಿ ರೈತನೋರ್ವ ನೇಣಿಗೆ ಶರಣಾದ ಘಟನೆ ಭಾನುವಾರ ನಡೆದಿದೆ.

Advertisement

ನೇಣಿಗೆ ಶರಣಾದ ರೈತನನ್ನು ಧನಗುಂಡಯ್ಯ ನೀಲಕಂಠಯ್ಯ ಚಿಕ್ಕ ಸಿಂದೋಗಿ(48 ವ) ಎಂದು ಗುರುತಿಸಲಾಗಿದೆ. ಈ ರೈತನು ಸಾಲ ಬಾಧೆಯಿಂದ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ.

ಮೃತ ರೈತನು ಎರಡು ಎಕರೆ ಜಮೀನು ಹೊಂದಿದ್ದನು. ಸಾಲ ಬಾಧೆಗೆ ಒಂದು ಎಕರೆ ಮಾರಾಟ ಮಾಡಿ ಸಾಲ ತೀರಿಸಿದ್ದನು‌. ಆದರೂ ಸಾಲ ಉಳಿದಿತ್ತು. ಶನಿವಾರ ಮನೆಯವರು ಮಲಗಿದ್ದ ವೇಳೆ ನೇಣಿಗೆ ಶರಣಾಗಿದ್ದಾನೆ. ಮೃತನು ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next