Advertisement

ಭತ್ತದ ಮೇವಿಗೆ ರೈತರ ದುಂಬಾಲು

01:01 PM Dec 01, 2018 | Team Udayavani |

ಮುದಗಲ್ಲ: ಪ್ರಸಕ್ತ ಸಾಲಿನಲ್ಲಿ ಭೀಕರ ಬರ ಆವರಿಸಿದ ಹಿನ್ನೆಲೆಯಲ್ಲಿ ಮೇವಿನ ಕೊರತೆ ಉಂಟಾಗಿದ್ದು, ಜಾನುವಾರುಗಳನ್ನು ಸಾಕಲು ರೈತರು ಸಂಕಷ್ಟಪಡುವಂತಾಗಿದೆ. ಜಾನುವಾರು ಸಾಕಾಣಿಕೆದಾರರು, ರೈತರು ಭತ್ತದ ಮೇವಿಗೆ ಈಗಿನಿಂದಲೇ ದುಂಬಾಲು ಬಿದ್ದಿದ್ದಾರೆ.

Advertisement

ಇದರಿಂದಾಗಿ ಭತ್ತದ ಮೇವಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇಲ್ಲಿನ ರೈತರು ಸಿಂಧನೂರ, ಗಂಗಾವತಿ, ಮಾನ್ವಿ, ಸುರಪುರ ಸೇರಿದಂತೆ ನೀರಾವರಿ ಪ್ರದೇಶಗಳಿಗೆ ತೆರಳಿ ಭತ್ತದ ಮೇವು ಖರೀದಿಸಿ ತರುತ್ತಿದ್ದಾರೆ. ಮಳೆ ಅಭಾವ ಉಂಟಾಗಿದ್ದರಿಂದ ಸಜ್ಜೆ, ಜೋಳ, ಮೆಕ್ಕೆಜೋಳ ಬೆಳೆಗಳು ಸರಿಯಾಗಿ ಬಾರದೆ ಮೇವಿನ ಕೊರತೆ ಉಂಟಾಗಿದೆ. ವರ್ಷ ಪೂರ್ತಿ ಜಾನುವಾರುಗಳನ್ನು ಮೇಯಿಸಲು ಕಷ್ಟಸಾಧ್ಯವಾಗಿದೆ. ಆದ್ದರಿಂದ ರೈತರು ಮುಂದಿನ ದಿನಮಾನದಲ್ಲಿ ಮೇವಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಈಗಿನಿಂದಲೇ ಎಚ್ಚರಗೊಂಡಿದ್ದಾರೆ. ನಿತ್ಯ ಹತ್ತಾರು ಟ್ರ್ಯಾಕ್ಟರ್‌ ಮತ್ತು ಲಾರಿ ಮೂಲಕ ಮೇವು ತರುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಟ್ರ್ಯಾಕ್ಟರವೊಂದಕ್ಕೆ 10ರಿಂದ 15 ಸಾವಿರ ರೂ. ನೀಡಿ ಮೇವು ತರುತ್ತಿದ್ದಾರೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next