Advertisement

ದಯಾ ಮರಣ ಕೋರಿ ಜಿಲ್ಲಾಧಿಕಾರಿಗೆ ರೈತರ ಪತ್ರ

02:04 PM Jul 18, 2022 | Team Udayavani |

ಗುಂಡ್ಲುಪೇಟೆ: ಬ್ಯಾಂಕ್‌ ನಿಂದ ಪಡೆದಿರುವ ಸಾಲ ಮರುಪಾವತಿ ಮಾಡಲು ಕಾಲಾವಕಾಶ ಹಾಗೂ ಜಮೀನನ್ನು ಆನ್‌ಲೈನ್‌ ಮೂಲಕ ಹರಾಜು ಮಾಡುವ ಪ್ರಕ್ರಿಯೆ ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ದಯಾ ಮರಣ ನೀಡಬೇಕು ಎಂದು ರೈತ ಕುಟುಂಬದವರು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರಿಗೆ ಮನವಿ ಪತ್ರ ಕೊಟ್ಟಿರುವ ಘಟನೆ ನಡೆದಿದೆ.

Advertisement

ತಾಲೂಕಿನ ಕಂದೇಗಾಲ ಗ್ರಾಮದ ರೈತರಾದ ಗಿರೀಶ್‌ ಮತ್ತು ಗುಂಡಪ್ಪ ದಯ ಮರಣ ಕೋರಿ ಜಿಲ್ಲಾಧಿಕಾರಿಗೆ ಮನವಿ ಅರ್ಜಿ ಸಲ್ಲಿಸಿದ್ದಾರೆ. ಇವರು ಪಟ್ಟಣದ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ ಪಡೆದಿರುವ ಟ್ರ್ಯಾಕ್ಟರ್‌ ಸಾಲವನ್ನು ಮರುಪಾವತಿ ಮಾಡದ ಕಾರಣ ಅಧಿಕಾರಿಗಳು ಜಮೀನು ಹರಾಜಿಗೆ ಮುಂದಾಗಿದ್ದಾರೆ.

ನಮಗೆ ಅಸರೆ ಆಗಿರುವುದು ಜಮೀನು ಮಾತ್ರ ಇದನ್ನೇ ನಂಬಿಕೊಂಡು ಮನೆಯ ಏಳು ಮಂದಿ ಸದಸ್ಯರು ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ. ಆದರೆ ಈಗ ಇದನ್ನು ಬ್ಯಾಂಕ್‌ಅಧಿಕಾರಿಗಳು ಸಾಲದ ಹೆಸರಿನಲ್ಲಿ ಕಸಿದು ಕೊಂಡರೇ ನಮ್ಮಕುಟುಂಬ ಬೀದಿಗೆ ಬೀಳಲಿದ್ದೇವೆ. ಇರುವ ಜಮೀನನ್ನು ನಾವುಗಳು ಕಳೆದುಕೊಂಡರೇ ಮುಂದಿನ ದಿನಗಳಲ್ಲಿ ನಾವು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next