Advertisement

ವಿಜಯಪುರ : ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

08:06 PM Apr 12, 2021 | Girisha |

ವಿಜಯಪುರ : ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ರೈತ ಶರಣಬಸು ಗುರುಬಸಪ್ಪ ಹುಬ್ಬಳ್ಳಿ (48) ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Advertisement

ಏ.7 ರಂದೇ ವಿಷ ಸೇವಿಸಿದ್ದ ಶರಣಬಸು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ತೊಗರಿ ಹಾಗೂ ಕಡಲೆ ಬೆಳೆ ಹಾನಿ ಮತ್ತು ಲಿಂಬೆ ಬೆಳೆ ಕೈಕೊಟ್ಟ ಹಿನ್ನೆಲೆ ಆರ್ಥಿಕ ನಷ್ಟವಾಗಿತ್ತು. ಇದರಿಂದಾಗಿ ಶರಣಬಸು ಮಾನಸಿಕವಾಗಿ ನೊಂದಿದ್ದರು. ಇದಲ್ಲದೇ ಜಮೀನಿನ ಮೇಲೆ ಖಾಸಗಿಯಾಗಿ ಸುಮಾರು 10 ಲಕ್ಷ ರೂ.ಸಾಲ ಪಡೆದ್ದ. ಈ ಸಾಲ ತೀರಿಸುವ ಬಗೆ ತಿಳಿಯದೇ ಆತ್ಮ ಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next