Advertisement

ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್ : ರಾಕೇಶ್ ಟಿಕಾಯತ್ ಭಾಗಿ

06:02 PM Mar 20, 2021 | Team Udayavani |

ಶಿವಮೊಗ್ಗ :  ದಕ್ಷಿಣ ಭಾರತದ ರೈತರ ಮೊದಲ ಮಹಾಪಂಚಾಯತ್ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಪ್ರಾರಂಭವಾಗಿದ್ದು, ವೇದಿಕೆಗೆ ಭಾರತೀಯ ಕಿಸಾನ್ ಯೂನಿಯನ್ ನಾಯಕರು ಆಗಮಿಸಿದ್ದಾರೆ.

Advertisement

ರಾಷ್ಟ್ರೀಯ ನಾಯಕರಾದ ರಾಕೇಶ್ ಟಿಕಾಯತ್, ದರ್ಶನ್ ಪಾಲ್, ಯುದ್ವೀರ್ ಸಿಂಗ್ ಉಪಸ್ಥಿತಿಯಲ್ಲಿ ಪಂಚಾಯತ್ ಪ್ರಾರಂಭವಾಗಿದೆ.

ರಾಜ್ಯದ ರೈತ ಮುಖಂಡರುಗಳಾದ ಕಡಿದಾಳ್ ಶಾಮಣ್ಣ, ಕೋಡಿಹಳ್ಳಿ ಚಂದ್ರಶೇಖರ್, ಕೆ.ಟಿ.ಗಂಗಾಧರ್, ಹೆಚ್.ಆರ್.ಬಸವರಾಜಪ್ಪ ಇದೇ ಮಹಾ ಪಚಾಯತ್ ನಲ್ಲಿ ಭಾಗಿಯಾಗಿದ್ದರು. ಮಹಾ ಪಂಚಾಯತ್ ಆರಂಭದಲ್ಲಿ ಈವರೆಗಿನ ಹೋರಾಟದಲ್ಲಿ ಮೃತರಾದ ರೈತರಿಗೆ ಸಂತಾಪ ಸಲ್ಲಿಸಲಾಯಿತು.

ಇನ್ನು ಭತ್ತದ ಕಸೂತಿ ತೋರಣ ಅನಾವರಣದ ಮೂಲಕ ಮಹಾಪಂಚಾಯತ್ ಗೆ ಚಾಲನೆ ನೀಡಿದ್ದು, ರೈತಗೀತೆಗೆ ಹಸಿರು ಶಾಲು ತಿರುಗಿಸುವ ಮೂಲಕ ರೈತ ಹೋರಾಟದ ಕಿಚ್ಚನ್ನು ಹೆಚ್ಚಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next