Advertisement

ವಿಜಯಪುರ: ಸಿಡಿಲಿಗೆ ಬಲಿಯಾದ ರೈತ

10:00 PM Apr 14, 2022 | Team Udayavani |

ವಿಜಯಪುರ: ಜಿಲ್ಲೆ ವಿವಿಧ ಭಾಗಗಳಲ್ಲಿ ವರುಣಾರ್ಭಟಕ್ಕೆ ಜಿಲ್ಲೆಯಲ್ಲಿ ಓರ್ವ ರೈತ ಬಲಿಯಾಗಿದ್ದು, ಹಾನಿಯ ಅಂದಾಜು ಹೊರ ಬೀಳಬೇಕಿದೆ.

Advertisement

ಗುರುವಾರ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ಮಳೆ-ಗಾಳಿಯಾಗಿದೆ.  ಸುರಿದ ಮಳೆ ಸಿಡಿಲಿಗೆ ಬಲಿಯಾದ ರೈತನನ್ನು ವಿಜಯಪುರ ತಾಲೂಕಿನ ಮದಭಾವಿ ಗ್ರಾಮದ ಮರೆಮಸಾಬ್ ಜಾತಗಾರ (45) ಎಂದು ಗುರುತಿಸಲಾಗಿದೆ.

ಮರೆಮಸಾಬ್ ಜಮೀನಿನಲ್ಲಿ ಕೆಲಸ‌ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಮೃತನ ಕುಟುಂಬದಲ್ಲಿ ದುಖಃ ಮಡುಗಟ್ಟಿದೆ.

ಸುದ್ದಿ ತಿಳಿದು ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next