Advertisement

ಸಿಂದಗಿ: ಸಾಲಬಾಧೆಯಿಂದ ಮನನೊಂದ ರೈತ ಆತ್ಮಹತ್ಯೆ

02:48 PM Jun 07, 2020 | keerthan |

ವಿಜಯಪುರ: ಜಿಲ್ಲೆಯಲ್ಲಿ ರೈತರೊಬ್ಬರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂದಗಿ ತಾಲೂಕಿನಲ್ಲಿ ಜರುಗಿದೆ.

Advertisement

ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಹಡಗಿನಾಳ ಗ್ರಾಮದ 30 ವರ್ಷದ ಗಂಗಪ್ಪ ಅಣ್ಣಪ್ಪ ಶಿರಶ್ಯಾಡ ಎಂದು ಗುರುತಿಸಲಾಗಿದೆ.

ರೈತ ಗಂಗಪ್ಪ 3-15 ಎಕರೆ ಜಮೀನು ಹೊಂದಿದ್ದು, ಗುಬ್ಬೇವಾಡ ಕರ್ನಾಟಕ ವಿಕಾಸ ಬ್ಯಾಂಕ್ ನಲ್ಲಿ 1.50 ‌ಲಕ್ಷ ರೂ ಸಾಲ ಮಾಡಿದ್ದ ಎನ್ನಲಾಗಿದೆ.

ಪ್ರಕೃತಿ ವಿಕೋಪದಿಂದ ಸತತ ಬೆಳೆ ವೈಫಲ್ಯದ ಕಾರಣ ಗಂಗಪ್ಪ ಮಾಡಿದ ಸಾಲ ತೀರಿಸಲಾಗದೇ ಕಂಗಾಲಾಗಿದ್ದ. ಇದೇ ಕಾರಣದಿಂದ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಮೃತ ರೈತ ತಾಯಿ, ಪತ್ನಿ, ಮಗನನ್ನು ಅಗಲಿದ್ದಾರೆ.  ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next