Advertisement

ಹುಣಸೂರು: ಸಾಲ ತೀರಿಸಲಾಗದೆ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ

12:27 PM Oct 29, 2020 | keerthan |

ಹುಣಸೂರು: ಸಾಲಬಾದೆ ತಾಳಲಾರದೆ ರೈತನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಣಸೂರು ತಾಲೂಕಿನ ವದ್ಲಿ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಮೃತ ರೈತನನ್ನು ವದ್ಲಿ ಮನುಗನಹಳ್ಳಿ ಗ್ರಾಮದ ರೈತ ರಾಮಕೃಷ್ಣೇಗೌಡ ಎಂದು ಗುರುತಿಸಲಾಗಿದೆ.

ರೈತ ರಾಮಕೃಷ್ಣೇಗೌಡ ತಮ್ಮ ಹೊಲದಲ್ಲಿ ತಂಬಾಕು ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಆರು ವರ್ಷಗಳ ಹಿಂದೆ ಪಂಚವಳ್ಳಿಯ ಐಓಬಿ ಬ್ಯಾಂಕಿನಲ್ಲಿ 3.50 ಲಕ್ಷ ರೂ ಸಾಲ ಫಡೆದಿದ್ದರು. ಸಾಲ ತೀರಿಸಲಾಗದೆ ಸುಸ್ತಿಯಾಗಿತ್ತು. ಅಷ್ಟೇ ಅಲ್ಲದೆ 4 ಲಕ್ಷ ರೂ ಕೈಸಾಲವನ್ನೂ ಮಾಡಿದ್ದರು.

ಇದನ್ನೂ ಓದಿ:ಉ. ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ಕೂಡಲೇ ಪರಿಹಾರ ಒದಗಿಸಿ: ಸಿಎಂ ಗೆ ಸಿದ್ದರಾಮಯ್ಯ ಪತ್ರ

ಸಾಲ ತೀರಿಸಲಾಗಿದೆ ರಾಮಕೃಷ್ಣೇಗೌಡ ಬ್ಯಾರನ್ ನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸ್ಪಸ್ತಗೊಂಡಿದ್ದ ರಾಮಕೃಷ್ಣೇಗೌಡರನ್ನು ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

Advertisement

ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next