Advertisement

ಸಾಲಭಾದೆ: ಇಲಿ ಪಾಷಾಣ ಸೇವಿಸಿ ರೈತ ಆತ್ಮಹತ್ಯೆ

09:24 PM Dec 25, 2020 | mahesh |

ಕಲಬುರಗಿ: ಪ್ರವಾಹದಿಂದ ಬೆಳೆ ನಾಶ ಮತ್ತು ಸಾಲಭಾದೆ ತಾಳದೆ ರೈತನೋರ್ವ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಕುಂದನೂರ ಗ್ರಾಮದಲ್ಲಿ ನಡೆದಿದೆ.

Advertisement

ಮಹೆಬೂಬ ಪಟೇಲ್ ಮೂಲಿಮನಿ (48) ಎಂಬಾತನೇ ಆತ್ಮಹತ್ಯೆಗೆ ಶರಣಾದ ರೈತ. ಇತ್ತೀಚೆಗೆ ಉಂಟಾದ ಭೀಕರ ಭೀಮಾ ಪ್ರವಾಹಕ್ಕೆ ಎಂಟು ಎಕರೆ ಹತ್ತಿ ಬೆಳೆ ಸಂಪೂರ್ಣ ನಾಶವಾಗಿದೆ ಎನ್ನಲಾಗಿದೆ.

ಇದೇ ಬೆಳೆಯನ್ನೆ ನಂಬಿಕೊಂಡು ಮಹೆಬೂಬ ಪಟೇಲ್ ಎರಡು ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿದ್ದ. ಆದರೆ, ಬೆಳೆ ನಾಶದಿಂದ ಸಾಲ ತೀರಿಸಲಾಗದೆ ದನದ ಕೊಟ್ಟಿಗೆಯಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬ ಮೂಲದಿಂದ ತಿಳಿದು ಬಂದಿದೆ.

ಈ ಘಟನೆ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next