Advertisement

ಅಮಾನತ್ತಿನಲ್ಲಿ ಇಡಲು ಸಾಧ್ಯವೇ?

01:43 AM Jan 23, 2021 | Team Udayavani |

ಹೊಸದಿಲ್ಲಿ: ಮೂರು ಕೃಷಿ ಕಾಯ್ದೆಗಳ ಬಗ್ಗೆ ಕೇಂದ್ರ ಸರಕಾರ ಮತ್ತು ರೈತ ಮುಖಂಡರ ನಡುವೆ ಹಗ್ಗಜಗ್ಗಾಟದ ನಡುವೆಯೇ ಕಾನೂನಾತ್ಮಕ ಜಿಜ್ಞಾಸೆಯೊಂದು ತಲೆದೋರಿದೆ. ನಿಜಕ್ಕೂ ಕೇಂದ್ರ ಸರಕಾರಕ್ಕೆ ತನ್ನ ಮೂರು ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತಿನಲ್ಲಿ ಇಡಲು ಅಧಿಕಾರವಿದೆಯೇ ಎಂಬ ಪ್ರಶ್ನೆ ಎದ್ದಿದೆ.

Advertisement

ಸಂಸದೀಯ ತಜ್ಞರ ಪ್ರಕಾರ, ಕೇಂದ್ರ ಸರಕಾರಕ್ಕೆ ಒಮ್ಮೆ ಸಂಸತ್‌ನಲ್ಲಿ ಪಾಸಾದ ಯಾವುದೇ ಕಾಯ್ದೆಗಳನ್ನು ಅಮಾನತಿನಲ್ಲಿ ಇಡಲು ಅಥವಾ ರದ್ದುಗೊಳಿಸಲು ಅಧಿಕಾರವಿಲ್ಲ. ಇಂಥ ಅಧಿಕಾರವಿರುವುದು ಸಂಸತ್‌  ಮತ್ತು ಸುಪ್ರೀಂ ಕೋರ್ಟ್‌ಗೆ ಮಾತ್ರ. ಈಗಾಗಲೇ ಸುಪ್ರೀಂ ಕೋರ್ಟ್‌ ಮೂರು ಕಾಯ್ದೆಗಳನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇರಿಸಿದೆ. ಆದರೆ ಕೇಂದ್ರ ಸರಕಾರ ರೈತರ ಮುಂದೆ ಒಂದೂವರೆ ವರ್ಷಗಳ ಕಾಲ ಅಮಾನತಿನಲ್ಲಿ ಇಡುತ್ತೇವೆ ಎಂದು ಹೇಳಿದೆ. ಈ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆಯೇ ಎಂದು ಬಿಜೆಪಿಯಿಂದ ಬಂಡಾಯವೆದ್ದು ಹೊರಹೋಗಿರುವ ಯಶವಂತ ಸಿನ್ಹಾ ಪ್ರಶ್ನಿಸಿದ್ದಾರೆ.

ಸಂವಿಧಾನದಲ್ಲೇ ಪ್ರಸ್ತಾವವಿಲ್ಲ: ವಿಶೇಷವೆಂದರೆ ಒಮ್ಮೆ ಸಂಸತ್‌ನಲ್ಲಿ ಅಂಗೀಕಾರಕೊಂಡ ಕಾಯ್ದೆಯನ್ನು ಅಮಾನತಿನಲ್ಲಿ ಇಡುವುದು ಅಥವಾ ರದ್ದು ಮಾಡುವ ಬಗ್ಗೆ ಪ್ರಸ್ತಾವವೇ ಇಲ್ಲ. ಆದರೆ ಸಚಿವರೊಬ್ಬರು ಹೇಳುವ ಪ್ರಕಾರ, ಕಾಯ್ದೆಗಳ ಕುರಿತಾಗಿ ಹೊರಡಿಸಲಾಗಿರುವ ಗೆಜೆಟ್‌ ನೋಟಿಫಿಕೇಶನ್‌ ಅನ್ನು ರದ್ದು ಮಾಡಬಹುದು. ಇದಕ್ಕಾಗಿ ಹೊಸ ನೋಟಿಫಿಕೇಶನ್‌ ಹೊರಡಿಸಬೇಕು ಅಷ್ಟೇ. ಇದಕ್ಕಾಗಿ ಸಂಸತ್‌ಗೆ ಮತ್ತೆ ಹೋಗಬೇಕಾಗಿಲ್ಲ ಎಂದು ಹೇಳಿದ್ದಾರೆ.

ಆದರೆ ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ಅವರು ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ಹೇಳುತ್ತಾರೆ. ಸರಕಾರಕ್ಕೆ ಕೇವಲ ಜಾರಿ ಮಾಡುವ ಅಧಿಕಾರವಿದೆ. ವಾಪಸ್‌ ತೆಗೆದುಕೊಳ್ಳುವ ಅಥವಾ ಅಮಾನತಿನಲ್ಲಿ ಇಡುವ ಅಧಿಕಾರವಿಲ್ಲ ಎಂದಿದ್ದಾರೆ. ಇದನ್ನೇ ಲೋಕಸಭೆಯ ಮತ್ತೂಬ್ಬ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್‌ ಕಶ್ಯಪ್‌ ಕೂಡ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next