Advertisement

AP: ಕ್ರಿಕೆಟ್‌ ಪದ್ಯ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ವಿದಾಯ- ಅಂಬಾಟಿ ರಾಯುಡು

10:42 PM Jan 07, 2024 | Team Udayavani |

ವಿಶಾಖಪಟ್ಟಣ: ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಸೇರಿ ಎಂಟು ದಿನಗಳಲ್ಲೇ ಪಕ್ಷ ತೊರೆದ ಹಿಂದಿನ ಕಾರಣದ ಕುರಿತು ಟೀಂ ಇಂಡಿಯಾದ ಮಾಜಿ ಕ್ರಿಕೆಟರ್‌ ಅಂಬಾಟಿ ರಾಯಡು ಬಹಿರಂಗಪಡಿಸಿದ್ದಾರೆ.
“ದುಬೈನಲ್ಲಿ ಜ.20ರಿಂದ ಆರಂಭವಾಗಲಿರುವ ಇಂಟರ್‌ನ್ಯಾಷನಲ್‌ ಲೀಗ್‌ ಟಿ20 ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್‌ ಎಮಿರೇಟ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ವೃತ್ತಿಪರ ಕ್ರೀಡೆ ಆಡುವಾಗ ರಾಜಕೀಯದಿಂದ ದೂರ ಇರುವುದು ಉತ್ತಮ.

Advertisement

ಹೀಗಾಗಿ ನನ್ನ ರಾಜಕೀಯ ಪಯಣಕ್ಕೆ ತಾತ್ಕಾಲಿಕ ಬ್ರೇಕ್‌ ನೀಡಿದ್ದೇನೆ’ ಎಂದು ಅಂಬಾಟಿ ರಾಯುಡು ಟ್ವೀಟ್‌(ಎಕ್ಸ್‌) ಮಾಡಿದ್ದಾರೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್‌.ಜಗನ್ಮೋಹನ್‌ ರೆಡ್ಡಿ ಅವರ ಸಮ್ಮುಖದಲ್ಲಿ ಅಂಬಾಟಿ ರಾಯುಡು ಅವರು ಡಿ.28ರಂದು ವೈಎಸ್‌ಆರ್‌ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಆದರೆ ಎಂಟೇ ದಿನದಲ್ಲಿ ಪಕ್ಷವನ್ನು ತೊರೆದರು.

Advertisement

Udayavani is now on Telegram. Click here to join our channel and stay updated with the latest news.

Next