Advertisement

ಫರಂಗಿಪೇಟೆಯ ಜೋಡಿ ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಬಂಧನ

10:15 AM Oct 11, 2019 | sudhir |

ಬಂಟ್ವಾಳ: ಎರಡು ವರ್ಷಗಳ ಹಿಂದೆ ಫರಂಗಿಪೇಟೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಬುಧವಾರ ಬಂಟ್ವಾಳ ಪೊಲೀಸರು ಮಂಗಳೂರಿನ ಕಂಕನಾಡಿಯಲ್ಲಿ ಬಂಧಿಸಿದ್ದಾರೆ.

Advertisement

ಬಂಟ್ವಾಳ ತಾಲೂಕು ಮಾರಿಪಳ್ಳ ನಿವಾಸಿ ಜಬ್ಬಾರ್ ಬಂಧಿತ ಆರೋಪಿ. ಬಂಟ್ವಾಳ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಡಿ.ನಾಗರಾಜ್ ಹಾಗೂ ಗ್ರಾಮಾಂತರ ಪಿಎಸ್ಐ ಪ್ರಸನ್ನ ಅವರ ತಂಡ ಬಂಧಿಸಿದ್ದು, ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಘಟನೆಯ ವಿವರ
2017ರ ಸೆ.25ರಂದು ರಾತ್ರಿ ಫರಂಗಿಪೇಟೆಯಲ್ಲಿ ಕಣ್ಣೂರು ಹಾಗೂ ಮಾರಿಪಳ್ಳದ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಈ ಸಂದರ್ಭದಲ್ಲಿ ಕಣ್ಣೂರಿನ ರಿಯಾಝ್ ಹಾಗೂ ಫಯಾಜ್ ಅವರ ಕೊಲೆ ನಡೆದಿತ್ತು. ಜತೆಗೆ ಹಲವು ಮಂದಿ ಯುವಕರು ಗಾಯಗೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಪ್ರಧಾನ ಆರೋಪಿ ಜಬ್ಬಾರ್ ತಲೆಮರೆಸಿಕೊಂಡಿದ್ದ. ಜತೆಗೆ ಪೊಲೀಸರ ಕಣ್ತಪ್ಪಿಸಿ ವಿದೇಶಕ್ಕೂ ತೆರಳಿದ್ದ.
ಆದರೆ ಕೆಲ ಸಮಯಗಳ ಹಿಂದೆ ಈತ ನೇಪಾಳದ ಮೂಲಕ ಭಾರತಕ್ಕೆ ಮರಳಿ ಕಂಕನಾಡಿಯಲ್ಲಿ ನೆಲೆಸಿದ್ದ ಎಂದ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next