Advertisement

ನಟನನ್ನು ನೋಡಲು ನದಿಗೆ ಹಾರಿದ ಅಭಿಮಾನಿ…ವಿಡಿಯೋ ವೈರಲ್  

05:08 PM Mar 11, 2021 | Team Udayavani |

ಹೈದರಾಬಾದ್ : ಚಿತ್ರದ ಶೂಟಿಂಗ್‍ನಲ್ಲಿದ್ದ ಟಾಲಿವುಡ್ ನಟ ನಾಗಚೈತನ್ಯ ಅವರನ್ನು ಭೇಟಿಯಾಗಲೆಂದು ಅಭಿಮಾನಿಯೋರ್ವ ಸೇತುವೆಯಿಂದ ನೀರಿಗೆ ಹಾರಿದ ಘಟನೆ ನಡೆದಿದೆ.

Advertisement

ತೆಲುಗು ಚಿತ್ರರಂಗದ ಖ್ಯಾತ ನಟ ನಾಗಚೈತನ್ಯ ಸದ್ಯ ‘ಥ್ಯಾಂಕ್ಯೂ’ ಸಿನಿಮಾದಲ್ಲಿ ಬ್ಯುಝಿಯಾಗಿದ್ದಾರೆ. ಇತ್ತೀಚಿಗಷ್ಟೆ ಈ ಚಿತ್ರದ ಶೂಟಿಂಗ್ ಪೂರ್ವ ಗೋದಾವರಿ ನದಿಯಲ್ಲಿ ನಡೆಯುತ್ತಿತ್ತು. ಬೋಟ್ ಮೇಲೆ ನಾಯಕ ನಟ ಬರುವ ದೃಶ್ಯ ಚಿತ್ರೀಕರಿಸಲಾಗುತ್ತಿತ್ತು. ನೆಚ್ಚಿನ ನಟನನ್ನು ಭೇಟಿಯಾಗಲು, ಅವರ ಜತೆ ಮಾತಾಡಲು ನೂರಾರು ಜನ ಅಭಿಮಾನಿಗಳು ಚಿತ್ರೀಕರಣದ ಸ್ಥಳದಲ್ಲಿ ನೆರೆದಿದ್ದರು. ಈ ವೇಳೆ ಅಭಿಮಾನಿಯೋರ್ವ ಸೇತುವೆ ಮೇಲಿಂದ ಜಂಪ್ ಮಾಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚಿತ್ರೀಕರಣದ ನಂತರ ಆ ಅಭಿಮಾನಿಯನ್ನು ಭೇಟಿಯಾದ ನಟ ನಾಗಚೈತನ್ಯ ಬುದ್ಧಿವಾದ ಹೇಳಿದ್ದಾರೆ. ನಮ್ಮ ಮೇಲೆ ಅಭಿಮಾನ, ಪ್ರೀತಿ ಇರಲಿ, ಆದರೆ ಅದು ಪ್ರಾಣಕ್ಕೆ ಕುಂದುತಂದುಕೊಳ್ಳುವಂತೆ ಇರಬಾರದು. ಇನ್ಮುಂದೆ ಹೀಗೆ ಮಾಡಬಾರದೆಂದು ಕಿವಿ ಮಾತು ಹೇಳಿ ಕಳುಹಿಸಿದ್ದಾರೆ.

ಇನ್ನು ‘ಥ್ಯಾಂಕ್ಯೂ’ ಚಿತ್ರಕ್ಕೆ ವಿಕ್ರಮ್.ಕೆ.ಕುಮಾರ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್‍ ನಡಿ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಇದರ ಜತೆಗೆ ಶೇಖರ್ ಕಮ್ಮುಲಾ ನಿರ್ದೇಶನದ ಪ್ರೇಮ ಕಥೆ ಹೊಂದಿರುವ ಮತ್ತೊಂದು ಸಿನಿಮಾದಲ್ಲಿ ನಾಗಚೈತನ್ಯ ನಟಿಸಲಿದ್ದು, ಇವರಿಗೆ ನಾಯಕಿಯಾಗಿ ಪ್ರೇಮಂ ಬೆಡಗಿ ಸಾಯಿ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next