Advertisement

ನರಸೀಪುರದ ಖ್ಯಾತ ನಾಟಿ‌ ವೈದ್ಯ ನಾರಾಯಣ ಮೂರ್ತಿ ಇನ್ನಿಲ್ಲ

01:28 PM Jun 25, 2020 | keerthan |

ಶಿವಮೊಗ್ಗ: ನರಸೀಪುರದ ಖ್ಯಾತ ನಾಟಿ‌ ವೈದ್ಯ ನಾರಾಯಣ ಮೂರ್ತಿ ಅವರು ಹೃದಯಾಘಾತದಿಂದ ನಿನ್ನೆ ತಡರಾತ್ರಿ ಮೃತಪಟ್ಟಿದ್ದಾರೆ.

Advertisement

ಕ್ಯಾನ್ಸರ್‌ ಸೇರಿದಂತೆ ಇತರೆ ಕಾಯಿಲೆಗಳಿಗೆ ನಾಟಿ ಔಷಧ‌ ನೀಡುತ್ತಿದ್ದ‌‌ ನಾರಾಯಣ ಮೂರ್ತಿ ಅವರು ಹೃದಯಾಘಾತದಿಂದ ಬುಧವಾರ ತಡರಾತ್ರಿ ನಾರಾಯಣ ಮೂರ್ತಿ ನಿಧನ ಹೊಂದಿದ್ದಾರೆ. ನಾರಾಯಣ ಮೂರ್ತಿ‌ ಅವರಿಗೆ 80 ವರ್ಷ ವಯಸ್ಸಾಗಿತ್ತು.

ಬುಧವಾರ ರಾತ್ರಿ ಊಟ ಮಾಡಿದ ಬಳಿಕ ನಾರಾಯಣ ಮೂರ್ತಿಯವರಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಸಾಗರದ ಆಸ್ಪತ್ರೆಗೆ ದಾಖಲಿಸಿದರೂ, ಪ್ರಯೋಜನವಾಗಲಿಲ್ಲ ಎನ್ನಲಾಗಿದೆ.

ಕ್ಯಾನ್ಸರ್‌, ಕಿಡ್ನಿಸ್ಟೋನ್ ಸೇರಿದಂತೆ ಇತರೆ ಕಾಯಿಲೆಗಳಿಗೆ ನಾಟಿ ಔಷಧ‌ ನೀಡುತ್ತಿದ್ದ‌‌ ನಾರಾಯಣ ಮೂರ್ತಿ ಅವರ ಬಳಿ ಔಷಧ ಪಡೆಯಲು ದೇಶ ವಿದೇಶಗಳಿಂದ ಪ್ರತಿದಿನ ಸಾವಿರಾರು ಜನ‌ ಶಿವಮೊಗ್ಗ ಜಿಲ್ಲೆ‌ ಸಾಗರ ತಾಲೂಕು ಆನಂದಪುರ ಸಮೀಪದ‌ ನರಸೀಪುರಕ್ಕೆ ಬರುತ್ತಿದ್ದರು.

ನಾರಾಯಣ ಮೂರ್ತಿ ಅವರು ಪತ್ನಿ, ಪುತ್ರ ಮತ್ತು ನಾಲ್ವರು ಪುತ್ರಿಯರನ್ನು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next