Advertisement

Fishing ಕರಾವಳಿಯಲ್ಲಿ ಮತ್ಸ್ಯಕ್ಷಾಮ: ಸಚಿವ ವೈದ್ಯ ಬಾಗಿನ

10:45 PM Sep 08, 2024 | Team Udayavani |

ಭಟ್ಕಳ: ಕರಾವಳಿ ಭಾಗದ ಉತ್ತರ ಕನ್ನಡ, ಉಡುಪಿ, ಮಂಗಳೂರಿನಲ್ಲಿ ಮತ್ಸ್ಯಕ್ಷಾಮದಿಂದ ಮೀನುಗಾರಿಕಾ ಉದ್ಯಮದ ಮೇಲೆ ದುಷ್ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಮೀನುಗಾರಿಕೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭಟ್ಕಳ ತಾಲೂಕಿನ ಶಕ್ತಿ ಕ್ಷೇತ್ರವಾದ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಸ್ವತಃ ಬೋಟು ಚಲಾವಣೆ ಮಾಡಿಕೊಂಡು ಸಮುದ್ರಕ್ಕೆ ತೆರಳಿ ಸಮುದ್ರಕ್ಕೆ ಬಾಗಿನ ಸಲ್ಲಿಸಿದರು.

Advertisement

ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆ ಆರಂಭವಾಗಿ ತಿಂಗಳಿಗೂ ಹೆಚ್ಚು ಕಾಲ ಕಳೆದರೂ ಸಹ ಭಾರೀ ಮಳೆ, ಗಾಳಿ, ಪ್ರಕ್ಷುಬ್ಧ ವಾತಾವರಣ, ಮತ್ಸ್ಯಕ್ಷಾಮದ ಪರಿಣಾಮ ಮೀನುಗಾರಿಕಾ ಉದ್ಯಮ ತೀವ್ರ ಸಂಕಷ್ಟದಲ್ಲಿದೆ. ಪ್ರಕೃತಿ ವಿಕೋಪ ಮತ್ತು ಮತ್ಸ್ಯಕ್ಷಾಮದ ಹಿನ್ನೆಲೆಯಲ್ಲಿ ಹೆಚ್ಚಿನ ಬೋಟ್‌ಗಳು ಮೀನುಗಾರಿಕೆ ಆರಂಭಿಸಲು ಇನ್ನೂ ಮೀನಮೇಷ ಎಣಿಸುತ್ತಿರುವುದು ಸಚಿವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ದೇವರ ಮೊರೆ ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next