Advertisement

ShriNagar; 2 ತಿಂಗಳಲ್ಲೇ 2 ಯೋಧರ ಕಳೆದುಕೊಂಡ ಕುಟುಂಬ!

11:25 PM Jul 09, 2024 | Team Udayavani |

ಶ್ರೀನಗರ: ಭಾರತೀಯ ಸೇನೆಯಲ್ಲಿ ಮೇಜರ್‌ ಹುದ್ದೆಯಲ್ಲಿದ್ದ ಮಗನನ್ನು 2 ತಿಂಗಳ ಹಿಂದಷ್ಟೇ ಕಳೆದುಕೊಂಡ ಕುಟುಂಬಕ್ಕೆ ಸೋಮವಾರ ಕಥುವಾ ದಲ್ಲಿ ನಡೆದ ಉಗ್ರ ದಾಳಿ ಮೂಲಕ ಮತ್ತೂಂದು ಬರಸಿಡಿಲು ಬಡಿದಿದೆ. ಅದೇ ಕುಟುಂಬದ ಮತ್ತೂಂದು ಕುಡಿ ರೈಫ‌ಲ್‌ಮಾನ್‌ ಆದರ್ಶ್‌ ನೇಗಿ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

Advertisement

ಕಥುವಾ ದಾಳಿಯಲ್ಲಿ ಉತ್ತರಾ ಖಂಡದ ಗರ್ವಾಲ್‌ ರೈಫ‌ಲ್ಸ್‌ ರೆಜಿ ಮೆಂಟ್‌ನ 5 ಯೋಧರು ಹುತಾತ್ಮರಾಗಿ ದ್ದರು. ಈ ಪೈಕಿ ಆದರ್ಶ್‌ ನೇಗಿ ಕೂಡ ಒಬ್ಬರು. ಕೇವಲ 26 ವರ್ಷದ ಆದರ್ಶ್‌ ಬಿಎಸ್‌ಸಿ ವಿದ್ಯಾಭ್ಯಾಸವನ್ನೂ ಅರ್ಧಕ್ಕೇ ನಿಲ್ಲಿಸಿ 2018ರಲ್ಲಿ ಸೇನೆ ಸೇರ್ಪಡೆ ಗೊಂಡಿದ್ದರು. ಈಗ ಸೇನೆ ಸೇರಿದ 5 ವರ್ಷದಲ್ಲಿ  ಹುತಾತ್ಮ ರಾಗಿದ್ದಾರೆ. ಆದರ್ಶ್‌ ಅವರ ಸೋದರ ಸಂಬಂಧಿ ಮೇಜರ್‌ ಪ್ರಣಯ್‌ ನೇಗಿ ಕೂಡ ಎ.30ರಂದು ಹುತಾತ್ಮ ರಾಗಿದ್ದರು. ತಿಂಗಳ ಅಂತರದಲ್ಲೇ ಇಬ್ಬರು ಮಕ್ಕಳನ್ನು ಕಳೆದುಕೊಂಡ ಈ ಕುಟುಂಬ ಇದೀಗ ಕಣ್ಣೀರಲ್ಲೇ ಕೈ ತೊಳೆಯುವಂತಾಗಿದೆ.

ಕಥುವಾದಲ್ಲಿ ಹೇಡಿ ಕೃತ್ಯ ಎಸಗಿದ ಉಗ್ರರಿಗೆ ತಕ್ಕ ತಿರುಗೇಟು ನೀಡಲಾಗುತ್ತದೆ. ನಮ್ಮ ಯೋಧರ ತ್ಯಾಗ, ಬಲಿ ದಾನಗಳನ್ನು ವ್ಯರ್ಥವಾಗಲು ಬಿಡುವುದಿಲ್ಲ. ಈ ದಾಳಿ ಹಿಂದಿನ ದುಷ್ಟ ಶಕ್ತಿಗಳನ್ನು ಭಾರತ ಸೋಲಿಸಲಿದೆ.

ರಾಜನಾಥ ಸಿಂಗ್‌,  ರಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next