Advertisement

ಕ್ರಿಕೆಟ್ ಗಿಂತ ನನಗೆ ನನ್ನ ಕುಟುಂಬದ ರಕ್ಷಣೆ ಮುಖ್ಯ: ಸುರೇಶ್ ರೈನಾ

12:03 PM Apr 26, 2020 | keerthan |

ಹೊಸದಿಲ್ಲಿ: ಇಂತಹ ಸಂದರ್ಭದಲ್ಲಿ ಜನರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಭೇಕು. ಯಾರೂ ಮನೆಬಿಟ್ಟು ಹೊರಹೋಗಬಾರದು. ಪರಸ್ಪರ ಸಹಾಯ ಮಾಡಿಕೊಂಡು, ವೈರಸ್ ವಿರುದ್ಧ ಹೋರಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಕ್ರಿಕೆಟರ್ ಸುರೇಶ್ ರೈನಾ ಹೇಳಿದ್ದಾರೆ.

Advertisement

ನಾನು ಕಳೆದ ತಿಂಗಳೇ ನನ್ನ ದಿಲ್ಲಿಯ ಮನೆಗೆ ಬಂದಿದ್ದೇನೆ. ನಮ್ಮ ಚೆನ್ನೈ ಕ್ಯಾಂಪ್ ರದ್ದಾದ ಕೂಡಲೇ ಅಗತ್ಯ ತಯಾರಿ ಮಾಡಿಕೊಂಡೇ ಬಂದಿದ್ದೇನೆ. ನನ್ನ ಮಗಳು ಮತ್ತು ಮಡದಿಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ತಂದಿರಿಸಿದ್ದೇನೆ. ಈ ಸಮಯದಲ್ಲಿ ಹೊರಗೆ ಹೋಗುವುದು ತಪ್ಪು ಎಂದಿದ್ದಾರೆ.

ಕೋವಿಡ್-19 ವೈರಸ್ ಈಗ ಜಾಗತಿಕ ಪಿಡುಗು. ಕ್ರಿಕೆಟ್, ಐಪಿಎಲ್ ನಡೆಯಬೇಕು ನಿಜ, ಆದರೆ ನಮ್ಮವರ ಸುರಕ್ಷತೆ ಮುಖ್ಯ. ನನಗೆ ನನ್ನ ಕುಟುಂಬ, ಗೆಳೆಯರು, ಪ್ರೀತಿಸುವವರ ಆರೋಗ್ಯ ಕ್ರಿಕೆಟ್ ಗಿಂತ ಮುಖ್ಯ ಎಂದು ಎಡಗೈ ಆಟಗಾರ ಸುರೇಶ್ ರೈನಾ  ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next