Advertisement

ಲಾಕ್‌ಡೌನ್‌ ಕಟ್ಟು ನಿಟ್ಟಾಗಿ ಪಾಲಿಸಿ: ಟೋಪೆ

07:19 PM Apr 29, 2020 | Suhan S |

ಔರಂಗಾಬಾದ್‌, ಎ. 28: ಮರಾಠವಾಡದ ಇತರ ಜಿಲ್ಲೆಗಳಿಗಿಂತ ಔರಂಗಾಬಾದ್‌ನಲ್ಲಿ  ಕೋವಿಡ್ 19 ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಪ್ರಮಾಣವನ್ನು ಕಡಿಮೆ ಮಾಡಲು ಜಿಲ್ಲೆಯಲ್ಲಿ ಲಾಕ್‌ಡೌನ್‌ ಕಟ್ಟು ನಿಟ್ಟಾಗಿ ಪಾಲನೆ ಮಾಡುವಂತೆ ಆರೋಗ್ಯ ಸಚಿವ ರಾಜೇಶ್‌ ಟೋಪೆ ಹೇಳಿದ್ದಾರೆ.

Advertisement

ಔರಂಗಾಬಾದ್‌ ನಗರದಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆ ಆರೋಗ್ಯ ಸಚಿವ ರಾಜೇಶ್‌ ಟೋಪೆ ಅವರು ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ಸಮಯದಲ್ಲಿ ಹೆಚ್ಚುತ್ತಿರುವ ರೋಗಿಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ನಗರದಲ್ಲಿನ ಸಾವಿನ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ರೋಗಿಗಳಿಗೆ ಉತ್ತಮ ಚಿಕಿತ್ಸೆ ಒದಗಿಸಬೇಕು ಎಂದು ಹೇಳಿದ ಅವರು, ಸೋಂಕು ನಿಯಂತ್ರಣಕ್ಕೆ ತರಲು ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆಗೆ ಸಲಹೆ ನೀಡಿದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ 19 ಪ್ರಕರಣಗಳು ಕಡಿಮೆಯಾಗಿದ್ದು ಸಕಾರಾತ್ಮಕ ವಿಷಯ ಎಂದು ಹೇಳಿದ ಅವರು. ಇಲ್ಲಿನ ಮಹಾನಗರ ಪಾಲಿಕೆಯು ಕ್ವಾರಂಟೈನ್‌ ಹೊಂದಿರುವ ಸ್ಥಳಗಳಲ್ಲಿ ನಾಗರಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು. ನಗರದಲ್ಲಿ ಕೋವಿಡ್ 19 ಸೋಂಕಿತರು ಸೇರಿದಂತೆ ಇತರ ರೋಗಿಗಳಿಗೂ ಆರೋಗ್ಯ ಸೇವೆಗಳನ್ನು ಒದಗಿಸಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಗಳನ್ನು ಒದಗಿಸಬೇಕೆಂದು ಹೇಳಿದರು.

ಖಾಸಗಿ ವೈದ್ಯರು ಕೂಡ ಇಂತಹ ಸಂದರ್ಭದಲ್ಲಿ ಸೇವೆಗೆ ಮುಂದಾಗಬೇಕು ಎಂದು ಟೋಪೆ ಹೇಳಿದ್ದಾರೆ. ಇಡೀ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಉದಯ್‌ ಚೌಧರಿ ಮಾಹಿತಿ ನೀಡಿದರು ಮತ್ತು ನಗರದ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸುವ ಬಗ್ಗೆ ಸಿದ್ಧತೆ ಮಾಡಲಾಗಿದೆ. ನಗರದ ಹಾಟ್‌ ಸ್ಪಾಟ್‌ ಪ್ರದೇಶಗಳಲ್ಲಿ ನಾಗರಿಕರನ್ನು ಪರೀಕ್ಷಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಮನಪಾ ಆಯುಕ್ತ ಆಸ್ಟಿಕ್‌ ಕುಮಾರ್‌ ಪಾಂಡೆ ಹೇಳಿದರು.

ಮರಾಠವಾಡ ವಿಭಾಗಕ್ಕೆ ಮೊಬೈಲ್‌ ಎಕ್ಸರೆ ಘಟಕವನ್ನು ಒದಗಿಸುವಂತೆ ಸುನಿಲ್‌ ಕೇಂದ್ರೇಕರ್‌ ಬೇಡಿಕೆ ಇರಿಸಿದ್ದಾರೆ. ಕೋವಿಡ್ 19 ಟೆಸ್ಟ್ ಸೆಂಟರ್‌ ನಲ್ಲಿ ನಡೆಯುತ್ತಿರುವ ಕೆಲಸದ ಬಗ್ಗೆ ಘಾಟಿಯ ಅಧೀಕ್ಷಕ ಕಾನನ್‌ಯೆಲಿಕಾರ್‌ ಮಾಹಿತಿ ನೀಡಿದರು. ಮನಪಾದ ಆರೋಗ್ಯ ಅಧಿಕಾರಿಗಳಿಗೆ ನಟಿ ರಾಜಶ್ರೀ ದೇಶಪಾಂಡೆ ಹಾಗು ನಟ ಶಾರುಖ್‌ ಖಾನ್‌ ಮೂಲಕ ಎರಡೂವರೆ ಸಾವಿರ ಪಿಪಿಇ ಕಿಟ್‌ ದೊರೆತಿದೆ ಎಂದು ಅಧಿಕಾರಿ ಡಾ| ನೀತಾ ಪಡಲ್ಕರ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next