Advertisement

ಉದಾಸೀನತೆ ಮಾಡದೆ ಕಾನೂನು ಪಾಲಿಸಿ: ಡಾ|ಕೆ. ರಾಜೇಂದ್ರ

03:58 PM Mar 25, 2020 | Suhan S |

ತೇರದಾಳ: ಕೋವಿಡ್ 19 ಸೋಂಕು ತಡೆಗಟ್ಟಲು ಸರಕಾರ ಕಠಿಣ ಕ್ರಮ ಕೈಗೊಂಡಿದ್ದು, ಯಾರೂ ಉದಾಸೀನತೆ ಮಾಡದೆ ಕಾನೂನು ಪಾಲಿಸಬೇಕು. ಇಲ್ಲವಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ. ರಾಜೇಂದ್ರ ಹೇಳಿದರು.

Advertisement

ಮಂಗಳವಾರ ಪಟ್ಟಣದ ಕೋವಿಡ್ 19 ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ಮಹಾಮಾರಿ ಕೋವಿಡ್ 19 ಪಸರಿಸದಂತೆ ಮಹಾರಾಷ್ಟ್ರದಿಂದ ಬರುವ ಎಲ್ಲ ಬಗೆಯ ವಾಹನ ತಡೆಗಟ್ಟಬೇಕು. ಮನೆಬಿಟ್ಟು ಯಾರೂ ಹೊರಬರಬಾರದು. ಎಲ್ಲರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಉಪವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೊಳ್ಳಿ, ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ಗ್ರೇಡ್‌ 2ತಹಶೀಲ್ದಾರ್‌ ಎಸ್‌.ಬಿ. ಕಾಂಬಳೆ, ಪುರಸಭೆ ಮುಖ್ಯಾಧಿಕಾರಿ ಐ.ಎಸ್‌. ದಡ್ಡಿ ಇತರರಿದ್ದರು. ಪಟ್ಟಣದಲ್ಲಿ ಎಲ್ಲ ಅಂಗಡಿ-ಮುಂಗಟ್ಟು ಮುಚ್ಚಿದ್ದು. ಮನೆಯಿಂದ ಹೊರಬಂದ ಜನರನ್ನು ಪೊಲೀಸರು ಮನೆಯೊಳಗಿರಲು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next