Advertisement

Mumbai: ಬಿದ್ದುಹೋದ ಶಿವಾಜಿ ಪ್ರತಿಮೆ ನಿರ್ಮಿಸಿದ್ದು ನೌಕಾಪಡೆ: ಫ‌ಡ್ನವೀಸ್‌

10:12 PM Aug 27, 2024 | Team Udayavani |

ಮುಂಬೈ: ಮಹಾರಾಷ್ಟ್ರದ ಸಿಂಧೂದುರ್ಗದಲ್ಲಿ ಗಾಳಿ ಮಳೆಗೆ ಬಿದ್ದುಹೋದ ಶಿವಾಜಿ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು, ರಾಜ್ಯ ಸರ್ಕಾರವಲ್ಲ, ಭಾರತೀಯ ನೌಕಾಪಡೆ ಎಂದು ಉಪಮುಖ್ಯಮಂತ್ರಿ ದೇವೆಂದ್ರ ಫ‌ಡ್ನವೀಸ್‌ ಹೇಳಿದ್ದಾರೆ.

Advertisement

ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ನಾವು ಇನ್ನೂ ದೊಡ್ಡ ಪ್ರತಿಮೆಯನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು. ಪ್ರತಿಮೆಯನ್ನು ನಿರ್ಮಾಣ ಮಾಡಿದವರು, ಸ್ಥಳೀಯ ಆಡಳಿತದೊಂದಿಗೆ ಮಾತುಕತೆ ನಡೆಸಿಲ್ಲ. ಇಲ್ಲಿ ಬೀಸುವ ಗಾಳಿ, ಬಳಕೆ ಮಾಡಿರುವ ಕಬ್ಬಿಣದ ಗುಣಮಟ್ಟಗಳ ಬಗ್ಗೆ ಚರ್ಚೆ ನಡೆಸಿಲ್ಲ. ಸಮುದ್ರದ ಗಾಳಿಗೆ ಹೆಚ್ಚು ಸಮಯ ತೆರೆದುಕೊಂಡ ಕಾರಣ ಪ್ರತಿಮೆ ತುಕ್ಕು ಹಿಡಿದಿತ್ತು ಎಂದಿದ್ದಾರೆ. ಇದೇ ವೇಳೆ, ನೌಕಾಪಡೆ ಪ್ರತಿಮೆ ಕುಸಿತ ಬಗ್ಗೆ ತನಿಖೆ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next