Advertisement

ಸಿಎಂ ನಕಲಿ ಖಾತೆ ಸೃಷ್ಟಿಸಿ ಮಾಹೆ ಕುಲಸಚಿವರಿಗೆ ಮೇಲ್! ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

12:08 PM Nov 04, 2020 | sudhir |

ಉಡುಪಿ: ಅಪರಿಚಿತ ವ್ಯಕ್ತಿಯೊಬ್ಬ ಸಿಎಂ ಯಡಿಯೂರಪ್ಪ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿ ಮಣಿಪಾಲ ಮಾಹೆ ಕುಲಸಚಿವ ಡಾ| ನಾರಾಯಣ ಸಭಾಹಿತ್ ಅವರಿಗೆ ಮೇಲ್ ಕಳುಹಿಸಿರುವ ಪ್ರಕರಣ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಅಪರಿಚಿತ ವ್ಯಕ್ತಿ cm@karnataka.gov.in ಎಂಬ ನಕಲಿ ಐಡಿಯನ್ನು ಸೃಷ್ಟಿಸಿ ಅದರಿಂದ ಮಣಿಪಾಲ ಕುಲಸಚಿವ ಡಾ| ನಾರಾಯಣ್ ಸಭಾಹಿತ್ ಅವರಿಗೆ ಜಗತ್ತಿನಾದ್ಯಂತ ನೆಲೆಸಿರುವ ಮಣಿಪಾಲ ಮಾಹೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮತ್ತವರ ಪೋಷಕರು ತರಗತಿ ಪ್ರಾರಂಭಕ್ಕೆ ಆಕ್ಷೇಪ ವ್ಯಕ್ತ ಪಡಿಸಿ ಹಲವಾರು ದೂರುಗಳು ಬಂದಿವೆ.

ಪ್ರಸ್ತುತ ಸನ್ನಿವೇಶದಲ್ಲಿ ತರಗತಿಗಳನ್ನು ಪ್ರಾರಂಭಿಸುವುದು ಉತ್ತಮವಲ್ಲ. 2021ರ ಜ.2ನೇ ವಾರದೊಳಗೆ ತರಗತಿ ಪ್ರಾರಂಭಿಸ ಬೇಕಾದರೆ ವಿದ್ಯಾರ್ಥಿಗಳ ಪೋಷಕರಿಂದ ಒಪ್ಪಿಗೆ ಪತ್ರಕ್ಕೆ ಸಹಿ ಪಡೆಯಬೇಕು ಎಂಬುದಾಗಿ ಸಂದೇಶವನ್ನು ಕಳುಹಿಸಿದ್ದಾರೆ.

ಸಿಎಂ ಅವರ ಮಾಹಿತಿಯನ್ನು ಕದ್ದು, ಅದೇ ರೀತಿಯಾದ ನಕಲಿ ಮೇಲ್ ಐಡಿ ಸೃಷ್ಟಿ, ಮುಖ್ಯಮಂತ್ರಿ ಅವರೇ ಮೇಲ್ ಕಳುಹಿಸಿದ್ದಾಗಿ ಎನ್ನುವ ರೀತಿಯಲ್ಲಿ ಸಂಸ್ಥೆಗೆ ತಪ್ಪು ಮಾಹಿತಿ ನೀಡಿ ವಂಚಿಸಿದ್ದಾರೆ.

ಇದನ್ನೂ ಓದಿ:ಅಮೆರಿಕ ಮಹಾಸಮರ: ಸತತ 3ನೇ ಬಾರಿ ಗೆಲುವು ಸಾಧಿಸಿದ ಭಾರತೀಯ ಮೂಲದ ಕೃಷ್ಣಮೂರ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next