Advertisement

ನಕಲಿ ‘ಬೇಡ ಜಂಗಮ ಸರ್ಟಿಫಿಕೇಟ್’ವಿಚಾರ ತಾರಕಕ್ಕೇ: ಸಭೆಗೆ ನುಗ್ಗಲು ಯತ್ನ

03:50 PM Apr 27, 2022 | Team Udayavani |

ಬೆಂಗಳೂರು : ನಕಲಿ ‘ಬೇಡ ಜಂಗಮ ಸರ್ಟಿಫಿಕೇಟ್’ ವಿತರಣೆ ವಿಚಾರ ಈಗ ರಾಜ್ಯದಲ್ಲಿ ತಾರಕ್ಕೇರಿದ್ದು, ಬುಧವಾರ ಶಾಸಕರ ಭವನದಲ್ಲಿ ನಡೆಯುತ್ತಿದ್ದ ಎಸ್ ಸಿ, ಎಸ್ ಟಿ ಸಮಿತಿ ಸಭೆಗೆ ಬೇಡ ಜಂಗಮ ಸಮಿತಿ ಅಧ್ಯಕ್ಷ ಬಿ.ಡಿ.ಹಿರೇಮಠ ನುಗ್ಗಲು ಯತ್ನಿಸಿದ್ದಾರೆ.

Advertisement

ನಕಲಿ ಸರ್ಟಿಫಿಕೇಟ್ ಪಡೆದವರ ವಿರುದ್ಧ ವಿಧಾನಮಂಡಳ ಎಸ್ ಸಿ, ಎಸ್ ಟಿ ಸಮಿತಿ ಕ್ರಮಕ್ಕೆ ಮುಂದಾಗಿದ್ದು, ಸಮಿತಿಯ ನಿರ್ಧಾರಕ್ಕೆ ಬೇಡ ಜಂಗಮ ಅಭಿವೃದ್ಧಿ ಸಮಿತಿ  ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಬಿ.ಡಿ.ಹಿರೇಮಠ  ಸಭೆಯಲ್ಲಿ ಭಾಗಿಯಾಗಿದ್ದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಮೇಲೆ ಕೂಗಾಡಿ, ಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣ ಮಾಡಿದರು. ಶಾಸಕರಿಗೆ ಧಮ್ಕಿ ಹಾಕಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಿ.ಡಿ.ಹಿರೇಮಠರನ್ನು ವಶಕ್ಕೆ ಪಡೆದರು.

ಬೇಡ ಜಂಗಮ ನಕಲಿ ಸರ್ಟಿಫಿಕೇಟ್ ಪಡೆದವರ ಮೇಲೆ ಕ್ರಮಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅಧ್ಯಕ್ಷತೆಯ ವಿಧಾನಮಂಡಳ ಎಸ್ ಸಿ/ಎಸ್ ಟಿ ಸಮಿತಿ ಶಿಫಾರಸ್ಸು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next