Advertisement

ಆ್ಯಂಬುಲೆನ್ಸ್‌ ಚಾಲಕಿಯಾದ ಮಹಿಳೆ!

10:59 AM Aug 07, 2020 | mahesh |

ಕಲ್ಲಿಕೋಟೆ: ಕೇರಳದಲ್ಲಿ ಕೋವಿಡ್ ಬಿಕ್ಕಟ್ಟಿನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮಹಿಳೆಯೊಬ್ಬರು ಕೆಲಸವಿಲ್ಲದ ಕಾರಣ ಆ್ಯಂಬುಲೆನ್ಸ್‌ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಕಲ್ಲಿಕೋಟೆಯ ದೀಪಾ ಜೋಸೆಫ್ ಎಂಬಾಕೆ ಕಾಲೇಜ್‌ವೊಂದರಲ್ಲಿ ಬಸ್‌ ಚಾಲಕಿಯಾಗಿದ್ದರು. ಇದೀಗ ಶಾಲಾ ಕಾಲೇಜುಗಳು ಸ್ಥಗಿತಗೊಂಡಿವೆ. ಜೊತೆಗೆ ಸದ್ಯದ ಪರಿಸ್ಥಿತಿ ಯಲ್ಲಿ ಯಾವುದೇ ಉದ್ಯೋಗ ಕೂಡ ಸಿಗುತ್ತಿಲ್ಲ. ಹೀಗಾಗಿ ಜೀವನ ನಿರ್ವಹಣೆಗಾಗಿ ಆ್ಯಂಬುಲೆನ್ಸ್‌ ಚಾಲಕಿಯಾಗಿದ್ದಾರೆ. ಮನೆಯಲ್ಲಿ ಇಬ್ಬರು ಮಕ್ಕಳು ಹಾಗೂ ಪತಿ ಇದ್ದಾರೆ. ಮಗ 10ನೇ ಹಾಗೂ ಮಗಳು 8ನೇ ತರಗತಿ ಓದುತ್ತಿದ್ದಾಳೆ. ನನ್ನ ಕೆಲಸಕ್ಕೆ ಕುಟುಂಬದವರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎಂದು ದೀಪಾ ಜೋಸೆಫ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next