Advertisement

ಪಂಚ ಸವಾಲು ಎದುರಿಸಿ: ಪೇಜಾವರ ಶ್ರೀ

12:30 AM Feb 01, 2019 | Team Udayavani |

ಪ್ರಯಾಗ್‌ರಾಜ್‌: ರಾಮ ಮಂದಿರ ನಿರ್ಮಾಣ, ಗೋಹತ್ಯೆ  ನಿಷೇಧ, ನಿರುದ್ಯೋಗ ನಿವಾರಣೆ, ಗಂಗಾ ಶುದ್ಧೀಕರಣ, ಭ್ರಷ್ಟಾಚಾರ ನಿರ್ಮೂಲನೆ ಈ 5 ಪ್ರಮುಖ ಗುರಿಗಳನ್ನು ಸಾಧಿಸಲು ವಿಶ್ವ ಹಿಂದೂ ಪರಿಷತ್ತೆಂಬ ರಥದಲ್ಲಿ ಸಮಸ್ತ ಸಂತರು ಕೃಷ್ಣ ಸಾರಥ್ಯವಹಿಸಿ ಸಮಸ್ತ ಹಿಂದೂ ಸಮಾಜ ಅರ್ಜುನನಂತೆ ವೀರಾಗ್ರಣಿಗಳಾಗಿ ವಿಜಯ ಸಾಧಿಸುವ ತನಕ ಹೋರಾಟ ಮಾಡಬೇಕಾಗಿದೆ ಎಂದು ಇಲ್ಲಿ ನಡೆಯುತ್ತಿರುವ ಸಹಸ್ರಾರು ಸಂತರ ಧರ್ಮಸಭೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಗುರುವಾರ ಕರೆ ನೀಡಿದರು. 

Advertisement

ಅಯೋಧ್ಯೆ ನ್ಯಾಸ್‌ ಟ್ರಸ್ಟ್‌ನ ಶ್ರೀ ನೃತ್ಯ ಗೋಪಾಲ ದಾಸ್‌, ಶ್ರೀ ವಾಸುದೇವಾ ನಂದ ಸರಸ್ವತಿ, ಬದರಿ ಶಂಕರಾ ಚಾರ್ಯರು, ಆರೆಸ್ಸೆಸ್‌ ಸರ ಸಂಘಚಾಲಕ ಮೋಹನ್‌ ಭಾಗವತ್‌ ಉಪಸ್ಥಿತ ರಿದ್ದರು. ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥರೂ ಪಾಲ್ಗೊಂಡಿದ್ದು, ಸಮ್ಮೇಳ  ನ ಶುಕ್ರವಾರವೂ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next