Advertisement

ಕಣ್ಣುಗಳ ಕಾಳಜಿ ಅತ್ಯಗತ್ಯ

06:54 AM Jan 14, 2019 | Team Udayavani |

ಕಲಬುರಗಿ: ಪ್ರತಿಯೊಬ್ಬರು ಕಣ್ಣುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಪೊರೆ ಚಿಕಿತ್ಸೆ ಅಗತ್ಯವಾಗಿ ಮಾಡಿಸಿಕೊಳ್ಳಬೇಕೆಂದು ಕಮಲಾಪೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ| ನಿವೇದಿತಾ ಸ್ವಾಮಿ ಹೇಳಿದರು.

Advertisement

ನಗರದ ಬಿದ್ದಾಪೂರ ಕಾಲೋನಿಯ ಅಕ್ಕಮಹಾದೇವಿ ಆಶ್ರಮದಲ್ಲಿ ಭರುಖಾ ನೇತ್ರಾಲಯ, ಅನುಗ್ರಹ ಕಣ್ಣಿನ ಅಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಪೊರೆ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಜಯಶ್ರೀ ಬಸವರಾಜ ಮತ್ತಿಮಡು ತೆಂಗಿನ ಸಸಿಗೆ ನೀರುಣಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. 75ಕ್ಕೂ ಹೆಚ್ಚು ವಯೋವೃದ್ಧರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದರು. ಬಿದನೂರು ಗ್ರಾಪಂ ಸದಸ್ಯ ಬಸವರಾಜ ವಿ. ಪಾಟೀಲ, ಅಂಬಾರಾಯ ಎನ್‌.ಕೆ. ಚಲಗೇರಾ, ಬಿ.ಎಂ.ರಾವೂರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next