Advertisement

ರಮ್ಯಾ ಟ್ವೀಟ್‌ಗೆ ವ್ಯಾಪಕ ಆಕ್ರೋಶ

06:20 AM Feb 05, 2018 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ರ್ಯಾಲಿಯಲ್ಲಿ ಮಾತನಾಡಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್‌
ಸಾಮಾಜಿಕ ಮಾಧ್ಯಮ ವಿಭಾಗದ ಉಸ್ತುವಾರಿ ಹಾಗೂ ನಟಿ ರಮ್ಯಾ ಮಾಡಿದ ಟ್ವೀಟ್‌ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ರೈತರೇ ನನ್ನ ಪ್ರಥಮ (ಟಾಪ್‌) ಆದ್ಯತೆ. ಟಾಪ್‌ ಎಂದರೆ ಟೊಮಾಟೋ, ಆನಿಯನ್‌ (ಈರುಳ್ಳಿ), ಪೊಟಾಟೋ
(ಆಲೂಗಡ್ಡೆ) ಎಂದು ಮೋದಿ ಹೇಳಿದ್ದರು. ಇದನ್ನೇ ಬಳಸಿ ತಿರುಗೇಟು ನೀಡಿದ ರಮ್ಯಾ, ನೀವು ಮಾದಕವಸ್ತು
ಅಮಲಿನಲ್ಲಿದ್ದಾಗ (ಪಾಟ್‌) ಹೀಗಾಗುತ್ತದೆಯೇ ಎಂದು ಅರ್ಥ ಬರುವ ಟ್ವೀಟ್‌ ಮಾಡಿದ್ದಾರೆ.ಇದಕ್ಕೆ ಟ್ವಿಟರ್‌ನಲ್ಲಿ
ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ದೇಶದ ಪ್ರಧಾನಿ ವಿರುದ್ಧ ಅವಹೇಳನಕಾರಿ ಟ್ವೀಟ್‌ ಮಾಡಿದ್ದಕ್ಕೆ ರಮ್ಯಾ ವಿರುದ್ಧ
ಕಾಂಗ್ರೆಸ್‌ ಕ್ರಮ ಕೈಗೊಳ್ಳಬೇಕು ಎಂದೂ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಲಾಗುತ್ತಿದೆ. 

ರಮ್ಯಾ ಅವರು ಪ್ರಧಾನಿ ಬಗ್ಗೆ ಈ ರೀತಿ ಹೇಳಿಕೆ ನೀಡುವ ಮೂಲಕ ದೇಶದ ಜನತೆಯನ್ನೇ ಅವಮಾನಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್‌. ನರಸಿಂಹರಾವ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next