Advertisement

ಪ್ರಿಯಕರನ ಜತೆ ಸಿಕ್ಕಿಬಿದ್ದದ್ದಕ್ಕೆ ಪತಿಯ ಗುಪ್ತಾಂಗ ಹಿಸುಕಿ ಸಾಯಿಸಲು ಯತ್ನಿಸಿದ ಪತ್ನಿ.!

02:18 PM Apr 17, 2022 | Team Udayavani |

ಎಚ್‌.ಡಿ.ಕೋಟೆ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯೊಡನೆ ಮಾತಿನ ಚಕಮಕಿ ನಡೆದು ಪ್ರಿಯಕರನ ಜೊತೆ ಗೂಡಿ ಪತಿಯ ಗುಪ್ತಾಂಗ ಹಿಸುಕಿ ಸಾಯಿಸಲು ಯತ್ನಿಸಿದ ಆರೋಪದಡಿಯಲ್ಲಿ ಪತ್ನಿ ಮತ್ತು ಪ್ರಿಯಕರ ಜೈಲು ಸೇರಿದ್ದಾರೆ.

Advertisement

ತಾಲೂಕಿನ ಬೂದನೂರು ಗ್ರಾಮದ ವೀರಭದ್ರ ಅವರ ಮರ್ಮಾಂಗ ಹಿಸುಕಿ ಸಾಯಿಸುವ ಯತ್ನ ನಡೆಸಿದ ಆರೋಪದಲ್ಲಿ ಪತ್ನಿ ಕವಿತ (ಹೆಸರು ಬದಲಿಸಲಾಗಿದೆ) ಮತ್ತು ಆಕೆಯ ಪ್ರಿಯಕರ ಅಭಿಲಾಶ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ:ಪತಿ ಸಾವಿನ ಸುದ್ದಿ ಕೇಳಿ ಮಗನೊಂದಿಗೆ ಪತ್ನಿ ನೇಣಿಗೆ ಶರಣು!

ಕವಿತ ಕೇರಳ ಮೂಲದ ಅಭಿಲಾಶ್‌ ಎಂಬ ವ್ಯಕ್ತಿಯೊಡನೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದರೆಂದು ಪತಿ ವೀರಭದ್ರ ಅವರಿಗೆ ಅನುಮಾನ ಇತ್ತು. ಅದರಂತೆಯೇ ಮದ್ಯ ಸೇವಿಸಿದ ಪತಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಕೇರಳ ಮೂಲದ ಪ್ರಿಯಕರ ಅಭಿಲಾಶ್‌ ವೀರಭದ್ರನ ಮನೆಯಲ್ಲಿ ಪತ್ನಿಯೊಡನಿದ್ದ, ಈ ವೇಳೆ ಎಚ್ಚರಗೊಂಡ ಪತಿ, ಪತ್ನಿ ಪ್ರಿಯಕರನೊಡನೆ ದೃಶ್ಯಕಂಡು ಕೆಂಡಾಮಂಡಲನಾಗಿದ್ದಾನೆ. ಮೂವರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆಯೇ ಪ್ರಿಯಕರನೊಡ ಗೂಡಿದ ಪತ್ನಿ ಪತಿಯ ಮರ್ಮಾಂಗ ಹಿಸುಕಿ ಸಾಯಿಸಲು ಯತ್ನಿಸಿದಾಗ ಚೀರಾಟ ಆಲಿಸಿ ಮನೆಯಲ್ಲಿದ್ದ ಮಕ್ಕಳು ಮತ್ತು ನೆರೆಹೊರೆಯವರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಳಿಕ ಘಟನೆ ಕುರಿತು ಪತಿ ವೀರಭದ್ರ ಎಚ್‌.ಡಿ.ಕೋಟೆ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next