Advertisement

ಎಸಿಪಿ ವಿರುದ್ಧ ಎಫ್‌ಐಆರ್‌ಗಳಿಗೆ 23ರವರೆಗೆ ತಡೆಯಾಜ್ಞೆ ವಿಸ್ತರಣೆ

05:32 AM Jun 18, 2020 | Lakshmi GovindaRaj |

ಬೆಂಗಳೂರು: ಸಿಗರೇಟ್‌ ವ್ಯಾಪಾರಿಗಳಿಂದ ಹಣ ಸುಲಿಗೆ ಆರೋಪ ಸಂಬಂಧ ಎಸಿಪಿಯಾಗಿದ್ದ ಪ್ರಭು ಶಂಕರ್‌ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಪ್ರತ್ಯೇಕ 3 ಎಫ್ಐಆರ್‌ಗಳಿಗೆ ನೀಡಲಾಗಿರುವ ತಡೆ‌ಯಾಜ್ಞೆಯನ್ನು ಹೈಕೋರ್ಟ್‌ ಜೂ.23ರವರೆಗೂ ವಿಸ್ತರಿಸಿದೆ.

Advertisement

ಎಸಿಬಿ ತಮ್ಮ ವಿರುದ್ಧ ದಾಖಲಿಸಿರುವ 3ಪ್ರತ್ಯೇಕಎಫ್ಐಆರ್‌ ರದ್ದುಪಡಿಸುವಂತೆ ಕೋರಿ ಪ್ರಭು ಶಂಕರ್‌ ಸಲ್ಲಿಸಿದ ಕ್ರಿಮಿನಲ್‌ ಅರ್ಜಿಗಳು ನ್ಯಾ.ಎಚ್‌.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ  ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಸರ್ಕಾರದ ಪರ ವಕೀಲರು ಮಾಡಿದ ಮನವಿ ಪರಿಗಣಿಸಿದ ನ್ಯಾಯಪೀಠ ವಿಚಾರಣೆ ಜೂ.23ಕ್ಕೆ ಮುಂದೂಡಿತು.

ಜತೆಗೆ, ಅರ್ಜಿ ದಾರರ ವಿರುದ್ಧ ಎಸಿಬಿ ದಾಖಲಿಸಿರುವ 3 ಎಫ್ಐಆರ್‌ಗಳಿಗೆ ಈ ಹಿಂದೆ ನೀಡಲಾಗಿರುವ ತಡೆಯಾಜ್ಞೆಯನ್ನು ಮುಂದಿನ ವಿಚಾರಣೆವರೆಗೂ ವಿಸ್ತರಿಸಿತು. ಈ ಸಂಬಂಧ ಕಾಟನ್‌ಪೇಟೆ ಪೊಲೀ ಸರು ದಾಖಲಿಸಿ ರುವ ಪ್ರತ್ಯೇಕ 2  ಎಫ್ ಐಆರ್‌ಗಳಿಗೆ ನೀಡಿರುವ ತಡೆ‌ಯಾಜ್ಞೆ ಜೂ.23ರವರೆಗೆ ವಿಸ್ತರಿಸಿ ಹೈಕೋರ್ಟ್‌ ಮಂಗಳವಾರ (ಜೂ.16) ಆದೇಶಿಸಿದೆ. ಲಾಕ್‌ಡೌನ್‌ ವೇಳೆ ಅಕ್ರಮವಾಗಿ ಸಿಗರೇ ಟ್‌ ಮಾರಾಟಕ್ಕೆ ನೆರವು ನೀಡುವು ದಾಗಿ ತಿಳಿಸಿ ವ್ಯಾಪಾರಿಗಳಿಂದ 62.5 ಲಕ್ಷ  ರೂ. ಲಂಚ ಸ್ವೀಕಾರ ಆರೋಪದ ಮೇಲೆ ಕಾಟ ನ್‌ಪೇಟೆ ಪೊಲೀಸರು, ಎಸಿಬಿ ಪೊಲೀಸರು ಎಫ್ಐಆರ್‌ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next