Advertisement

ವೆಲ್ಡಿಂಗ್ ಮಾಡುವಾಗ ಟ್ಯಾಂಕರ್ ಸ್ಫೋಟ ; ಇಬ್ಬರ ಸಾವು‌

10:21 AM Dec 22, 2019 | keerthan |

ವಿಜಯಪುರ : ವೆಲ್ಡಿಂಗ್ ಮಾಡುವಾಗ ಎಥಿನಾಲ್ ಟ್ಯಾಂಕರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟು,‌ ಮೂವರು ಗಂಭೀರ ಗಾಯಗೊಂಡ ಘಟನೆ ನಗರದಲ್ಲಿ ಜರುಗಿದೆ.

Advertisement

ವಿಜಯಪುರ ನಗರದ ಗೋಲಗುಂಬಜ ಹಿಂಭಾಗದಲ್ಲಿ ರೇಲ್ವೆ ನಿಲ್ದಾಣದ ಬಳಿ ನಾಡಗೌಡ ರೋಡಲೈನ್ಸ್ ನಲ್ಲಿ ಈ ದುರಂತ ಸಂಭವಿಸಿದೆ.

ರೋಡಲೈನ್ಸ್ ಗ್ಯಾರೇಜ್ ನಲ್ಲಿ ವೆಲ್ಡಿಂಗ್ ಕೆಲಸ ಮಾಡುವಾಗ ನಡೆದ ಸ್ಫೋಟ ದುರಂತದಲ್ಲಿ ಮೃತರನ್ನು ಉತ್ತರಪ್ರದೇಶ ಮೂಲದ ವೀರೇಂದ್ರ ಪ್ರಜಾಪತಿ (31) ಹಾಗೂ ರಾಜು ಗಿಡ್ಡೆ (36) ಎಂದು ಗುರುತಿಸಲಾಗಿದೆ.

ವಿಶ್ವನಾಥ ಬಡಿಗೇರ (29), ಪ್ರಕಾಶ ಶಿರೋಳ (35) ಮತ್ತು ಬಸವರಾಜ ಡೋಣೂರ (55) ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಎಥಿನಾಲ್ ಖಾಲಿ‌ ಮಾಡಿದ ಬಳಿಕ ಗ್ಯಾರೇಜ್ ಗೆ ತಂದು ಟ್ಯಾಂಕರ್ ವೆಲ್ಡಿಂಗ್ ಮಾಡುವಾಗ ಭಾರೀ ಸ್ಪೋಟವಾಗಿ ದುರಂತ ಸಂಭವಿಸಿದೆ.

Advertisement

ಘಟನೆಯ  ಭಾರಿ ಸ್ಫೋಟದ ಸದ್ದು ಕೇಳಿ ಸ್ಥಳೀಯ ನಿವಾಸಿಗಳು ಆತಂಕಕ್ಕೆ‌ ಈಡಾಗಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಗೋಲಗುಮ್ಮಟ ಠಾಣೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next