Advertisement

ರಾಜ್ಯಕ್ಕೂ ಎನ್‌ಆರ್‌ಸಿ ವಿಸ್ತರಿಸಿ: ತೇಜಸ್ವಿ ಆಗ್ರಹ

12:54 AM Jul 11, 2019 | Lakshmi GovindaRaj |

ನವದೆಹಲಿ: ಅಸ್ಸಾಂನಲ್ಲಿ ಜಾರಿಗೊಂಡಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ಕರ್ನಾಟಕದಲ್ಲೂ ಜಾರಿಗೊಳಿಸಬೇಕೆಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Advertisement

ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾದೇಶೀಯರು ನೆಲೆಸಿದ್ದು, ರಾಜ್ಯಕ್ಕೆ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಭದ್ರತೆಗೆ ಸವಾಲೆಸೆದಿದ್ದಾರೆ.

ಜತೆಗೆ, ಕರ್ನಾಟಕದಲ್ಲಿ ಸ್ಥಳೀಯರಿಗೆ ಸಿಗಬೇಕಿರುವ ಉದ್ಯೋಗಗಳನ್ನೂ ಕಿತ್ತುಕೊಂಡು ರಾಜ್ಯದ ಆರ್ಥಿಕತೆಗೂ ಸವಾಲೊಡ್ಡುತ್ತಿದ್ದಾರೆ. ಹಾಗಾಗಿ, ಅಸ್ಸಾಂನಲ್ಲಿ ನೆಲೆಯೂರಿರುವ ಅಕ್ರಮ ವಲಸಿಗರನ್ನು ಗುರುತಿಸಲು ಜಾರಿಗೊಳಿಸಲಾಗಿರುವ ಎನ್‌ಆರ್‌ಸಿಯನ್ನು ಕರ್ನಾಟಕಕ್ಕೂ ವಿಸ್ತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next