Advertisement

ಮಹಿಳೆಯ ವೈಕಲ್ಯ ಮೀರಿದ ಪರಿಶ್ರಮ

04:32 PM Jun 04, 2019 | Team Udayavani |

ತಿರುವನಂತಪುರ: ಸಾಧನೆಗೆ ಅಂಗವೈಕಲ್ಯ ಎಂದಿಗೂ ತೊಡಕಲ್ಲ ಎಂಬುದನ್ನು ಸಾಬೀತುಪಡಿಸಿರುವ ಅನೇಕ ಪ್ರತಿಭೆಗಳಿಗೆ ಇದೀಗ ಕೊಟ್ಟಾಯಂನ ಲತೀಶಾ ಅನ್ಸಾರಿ ಸೇರ್ಪಡೆಗೊಂಡಿದ್ದಾರೆ. ಅನ್ಸಾರಿ,

Advertisement

ಹುಟ್ಟಿನಿಂದಲೇ ಮೂಳೆಗಳ ಸಂಬಂಧಿತ ಕಾಯಿಲೆಯನ್ನು (ಟೈಪ್‌ 2 – ಒಸ್ಟಿಯೋಜೆನಿಸಿಸ್‌ ಇಂಪರ್ಫೆಕ್ಟಾ) ಹೊಂದಿದ್ದು, ಜತೆಗೆ ಪಲ್ಮನರಿ ಹೈಪರ್‌ಟೆನ್ಶನ್‌ ಹೊಂದಿದ್ದಾರೆ. ಹಾಗಾಗಿ, ಅವರು ಎಲ್ಲರಂತೆ ಸಹಜವಾಗಿ ಬೆಳವಣಿಗೆಯಾಗಿಲ್ಲ.

ಓಡಾಡಲು ಗಾಲಿ ಕುರ್ಚಿಯನ್ನೇ ಅವಲಂಬಿಸಿರುವ ಅವರು ಸದಾ ತಮ್ಮೊಂದಿಗೆ ಆಮ್ಲಜನಕದ ಸಿಲಿಂಡರನ್ನು ಹೊಂದಿರುತ್ತಾರೆ. ಇಂಥ ದಯನೀಯ ಸ್ಥಿತಿಯಲ್ಲಿದ್ದರೂ ಐಎಎಸ್‌ ಮಾಡುವ ಗುರಿ ಹೊಂದಿರುವ ಲತೀಶಾ, ಈ ಬಾರಿಯ ಐಎಎಸ್‌ ಪೂರ್ವಭಾವಿ ಪರೀಕ್ಷೆಯನ್ನೂ ತೆಗೆದುಕೊಂಡಿದ್ದರು.

ಕೊಟ್ಟಾಯಂನಲ್ಲಿ ರವಿವಾರ ಪರೀಕ್ಷೆ ಬರೆಯಲು ಆಮ್ಲಜನಕದ ಸಿಲಿಂಡರ್‌ ಜತೆಗೇ ಆಗಮಿಸಿದ್ದ ಇವರ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next