Advertisement

ಬಂಗಾಳದ ಅಭಿವೃದ್ಧಿಗಾಗಿ ದೀದಿಯನ್ನು ಸೋಲಿಸಿ : ಅಮಿತ್ ಶಾ

05:56 PM Mar 31, 2021 | Shreeraj Acharya |

ಕೊಲ್ಕತ್ತಾ : ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಷಣಕ್ಷಣಕ್ಕೂ ರಾಜಕೀಯ ನಾಯಕರುಗಳ ವಾಗ್ಯುದ್ಧಕ್ಕೆ ಸಾಕ್ಷಿಯಾಗುತ್ತಿದೆ. ಎರಡನೇ ಹಂತದ ಚುನಾವಣೆಗೆ ಇನ್ನೇನು ಕ್ಷಣ ಗಣನೆ ಇರುವಾಗ ಪಕ್ಷಗಳ ಚುನಾವಣಾ ಪ್ರಚಾರ ಸಭೆಗಳು ಬಿಡುವಿಲ್ಲದೆ ನಡೆಯುತ್ತಿದೆ.

Advertisement

ಪಶ್ಚಿಮ ಬಂಗಾಳದ ಹೈವೋಲ್ಟೇಜ್ ವಿಧಾನ ಸಭಾ ಕ್ಷೇತ್ರವೆಂದು ಕರೆಸಿಕೊಳ್ಳುವ ನಂದಿಗ್ರಾಮದಲ್ಲಿ ಇಂದು(ಮಾ. 30) ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ಮಾಡುವುದರ ಮೂಲಕ ಮತ ಯಾಚನೆ ಮಾಡಿದರು. ಶಾ ನೇತೃತ್ವದ ರೋಡ್ ಶೋ ನಲ್ಲಿ ಸಹಸ್ರಾರು ಮಂದಿ ಪಕ್ಷದ ಬೆಂಬಲಿಗರು ಪಾಲ್ಗೊಂಡಿದ್ದರು.  ಜೈ ಶ್ರೀರಾಮ್, ಅಮಿತ್ ಶಾ ಜಿಂದಾಬಾದ್ ಘೋಷಣೆಗಳು ಮುಗಿಲು ಮುಟ್ಟಿದ್ದವು.

ಓದಿ : ಜಾರಕಿಹೊಳಿ ಸಿಡಿ ಪ್ರಕರಣ: ನ್ಯಾಯಾಧೀಶರ ಮುಂದೆ ಹಾಜರಾದ ಯುವತಿ

ರೋಡ್ ಶೋ ಅನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ  ಗೃಹ ಸಚಿವರು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಂಗಾಳದ ರಾಜಕೀಯ ಹಿಂಸಾಚಾರದ ಬಗ್ಗೆ ಪ್ರಶ್ನೆ ಮಾಡಿದರೇ, ಯಾಕೆ ಮುಖ್ಯಮಂತ್ರಿ ಮಮತಾ ಮೌನ ತಾಳುತ್ತಾರೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ ಶಾ, ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತನೋರ್ವನ 85 ವರ್ಷದ ತಾಯಿ ಹಲ್ಲೆಗೊಳಗಾಗುತ್ತಾರೆ(ನಿನ್ನೆ ಮೃತರಾದ ಶೋಭಾ ಮಜುಂದಾರ್).  ಯಾಕೆ ದೀದಿ ಅವರು ಬಿಜೆಪಿ ಕಾರ್ಯಕರ್ತನ ತಾಯಿಯನ್ನು ಭೇಟಿ ಮಾಡಿಲ್ಲ..? ಅವರನ್ನು ತಳ್ಳಿದ ಟಿ ಎಎಮ್ ಸಿ ಕಾರ್ಯಕರ್ತರು ಯಾರು..? ಹಾಗಿದ್ದಲ್ಲಿ ಯಾಕೆ ದೀದಿ ಕ್ಷಮೆ ಕೇಳಿಲ್ಲ..? ಎಂದು ಪ್ರಶ್ನೆ ಮಾಡಿದ್ದಾರೆ.

Advertisement

ಇನ್ನು, ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಮಹಿಳಾ ದೌರ್ಜನ್ಯದ ಬಗ್ಗೆಯೂ ಮಾತುಗಳನ್ನಾಡಿದ ಅಮಿತ್ ಶಾ, ಮಮತಾ ಬ್ಯಾನರ್ಜಿ ವಾಸವಿದ್ದ ಸ್ಥಳದ 5 ಕಿ.ಮೀ ವ್ಯಾಪ್ತಿಯಲ್ಲಿ ಮಹಿಳೆಯೋರ್ವರ ಮೇಲೆ ಅತ್ಯಾಚಾರ ನಡೆದಿದೆ ಎಂಬ ಒಂದು ದುಃಖದ ವಾರ್ತೆ ನನಗೆ ಇಲ್ಲಿ ದೊರಕಿತು. ಮಮತಾ ಬ್ಯಾನರ್ಜಿ ಇದ್ದ ಸ್ಥಳದ ವ್ಯಾಪ್ತಿಯಲ್ಲಿಯೇ ಮಹಿಳೆಯೋರ್ವಳ ಮೇಲೆ ಅತ್ಯಾಚಾರ ಆಗುತ್ತದೆ ಎಂದಾದಲ್ಲಿ, ರಾಜ್ಯದ ಇತರೆಡೆ ಮಹಿಳೆಯರು ಹೇಗೆ ಸುರಕ್ಷಿತವಾಗಿರಲು ಸಾಧ್ಯ ..? ಯಾಕೆ ಇದುವರೆಗೆ ಸಂತ್ರಸ್ತ ಮಹಿಳೆಯನ್ನು ಮಮತಾ ಭೇಟಿಯಾಗಿಲ್ಲ..? ಮಮತಾ ಬ್ಯಾನರ್ಜಿ ಮಹಿಳಾ ಸುರಕ್ಷತೆಯ ಬಗ್ಗೆ ಮಾತನಾಡುತ್ತಾರೆ. ಆದರೇ, ಪಶ್ಚಿಮಬಂಗಾಳದ ಜನರಿಗೆ ಎಲ್ಲವೂ ತದ್ವಿರುದ್ಧವಾಗಿ ನಡೆಯುತ್ತಿರುವ ವಿಚಾರದ ಬಗ್ಗೆ ಅರಿವಿದೆ ಎಂದು ಹೇಳಿದ್ದಾರೆ.

ನಂದಿಗ್ರಾಮದ ಜನರ ಉತ್ಸಾಹವನ್ನು ನಾವು ನೋಡುತ್ತಿದ್ದೇವೆ. ಇದು,  ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಯವರು ನಿಸ್ಸಂಶಯವಾಗಿ ಬಹುಮತದಿಂದ ಗೆಲ್ಲಲಿದ್ದಾರೆ ಎಂಬುವುದನ್ನು ಸೂಚಿಸುತ್ತದೆ. ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯವರನ್ನು ಚುನಾವಣೆಯಲ್ಲಿ ಸೋಲಿಸುವುದು, ಪರಿವರ್ತನೆಯನ್ನು ತರುವ ಸುಲಭ ಮಾರ್ಗ ಎಂದು ಶಾ ಅಭಿಪ್ರಾಯ ಪಟ್ಟಿದ್ದಾರೆ.

ಓದಿ : ಕೆಂಪೇಗೌಡ ಈಗ ಹೀರೋ: ‘ಕಟ್ಲೆ’ ಮೂಲಕ ಅದೃಷ್ಟ ಪರೀಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next